ನಾಯಕನಹಟ್ಟಿ
ನಮ್ಮ ಮಾದಿಗ ಸಮುದಾಯದವರು ಯೇಸುಕ್ರಿಸ್ತರನ್ನು ಆರಾಧಿಸುವವರು ನಾವು ಕ್ರೈಸ್ತರು ಎಂದು ಹೆಸರು ನಮೂದಿಸಬೇಡಿ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್ಮೂರ್ತಿ ಮನವಿಮಾಡಿಕೊಂಡರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಅಂಬೇಡ್ಕರ್ ಕಾಲೋನಿಗೆ ಅಗಮಿಸಿ ಮಾದಿಗ ಜಾಗೃತಿ ಮೂಡಿಸಿದರು. ನಂತರ ಮಾತನಾಡಿದ ಅವರು ನ್ಯಾಯಮೂರ್ತಿ ನಾಗಮೋಹನ್ದಾಸ್ ರವರ ಏಕಸದಸ್ಯ ಸಮಿತಿಯಿಂದ ಒಳಮೀಸಲಾತಿ ಜಾರಿಗಾಗಿ ಪರಿಶಿಷ್ಠ ಜಾತಿಗಳಲ್ಲಿನ ಜಾತಿಗಣತಿಗಾಗಿ ಮನೆ-ಮನೆಗಳಿಗೆ ಭೇಟಿ ನೀಡಿದಾಗ ಮೂಲಜಾತಿ ಮಾದಿಗ ಎಂದು ಬರೆಸುವ ಮೂಲಕ ಸರಿಯಾದ ಮಾಹಿತಿ ನೀಡಬೇಕೆಂದು ಹೇಳಿದರು. ಜಾತಿಗಣತಿ ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಕಡ್ಡಾಯವಾಗಿ ಮಾದಿಗ ಎಂದು ಹೆಸರು ನೊಂದಾಯಿಸಬೇಕೆAದು ಹೇಳಿದರು. ಮಾಜಿ ಗ್ರಾ.ಪಂ. ಅಧ್ಯಕ್ಷ ಶಂಕರ್ಸ್ವಾಮಿ ನಾವು ಹುಟ್ಟುವ ಜಾತಿಯ ಹೆಸರಿನಲ್ಲಿ ಜನಗಣತಿ ಮಾಡಬೇಕು ಜಾತಿ ಜನಗಣತಿಯಲ್ಲಿ ಮಾದಿಗ ಜನಾಂಗವೆAದು ನಮೂದಿಸಬೇಕು, ಜಾತಿ ಗಣತಿ ಅಧಿಕಾರಿಗಳು ಬಂದಾಗ ನಮ್ಮ ಜಾತಿಯ ಹೆಸರು ಹೇಳಬೇಕು ಆದಿದ್ರಾವಿಡ, ಆದಿಕರ್ನಾಟಕ ಎಂದು ಹೇಳಬಾರದು ಅವುಗಳ ಹೆಸರುಗಳನ್ನೂ ಸಹ ಹೇಳಬೇಡಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ ಓಬಯ್ಯನಹಟ್ಟಿ ಗಜ್ಜುಗಾನಹಳ್ಳಿ ಮಲ್ಲೂರಹಳ್ಳಿ ವಿವಿಧ ಗ್ರಾಮಗಳಿಗೆ ಹೋಗಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಾದ ನೆಲಗೇತನಹಟ್ಟಿ ನಾಗರಾಜ್, ಪತ್ರಕರ್ತ ನಿಂಗರಾಜ್, ಮರಿಪಾಲಯ್ಯ, ಓಬಳೇಶ್, ಅಬ್ಬೇನಹಳ್ಳಿ ನಾಗರಾಜ್, ತಿಮ್ಮಪ್ಪಯ್ಯನಹಳ್ಳಿ ಹನುಮಂತ, ವೈ.ನಾಗರಾಜ್ ಮಾದಿಗ ಸಮುದಾಯದ ಮುಖಂಡರು, ಯುವಕರು, ಗಜ್ಜುಗಾನಹಳ್ಳಿ ಮಲ್ಲೇಶ್, ನನ್ನಿವಾಳ ಮಾಜಿ ಗ್ರಾ.ಪಂ. ಅಧ್ಯಕ್ಷ ಬಸವರಾಜ್, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಪಿ.ವಿ.ಓಬಳೇಶ್, ನೆಲಗೇತನಹಟ್ಟಿ ರಮೇಶ್, ಗಜ್ಜುಗಾನಹಳ್ಳಿ ಗ್ರಾಮ ಮುಖಂಡರು ಹಾಗೂ ಮಹಿಳೆಯರು ಇನ್ನಿತರರು ಇದ್ದರು.
