ಚಂದ್ರಯಾನ-3 ಯಶಸ್ಸಿನ ನಂತರ ಪ್ರಕಾಶ್‌ ರಾಜ್ ಹೇಳಿದ್ದಾದರೂ ಏನು….?

ಬೆಂಗಳೂರು: 

     ಚಂದ್ರಯಾನ-3 ಕುರಿತು ವಿವಾದಿತ ಟ್ವೀಟ್ ನಿಂದ ಭಾರಿ ಟೀಕೆ ಹಾಗೂ ಟ್ರೋಲ್ ಗೆ ಗುರಿಯಾಗಿದ್ದ ನಟ ಪ್ರಕಾಶ್ ರಾಜ್, ಇದೀಗ ಇಸ್ರೋ ಸಾಧನೆಗೆ ಬೆರಗಾಗಿದ್ದಾರೆ.

    ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ, ದೇಶ, ವಿದೇಶಾದ್ಯಂತ ಇಸ್ರೋ ಕಾರ್ಯಾಚರಣೆಗೆ ಪ್ರಶಂಸೆ, ಅಭಿನಂದನೆಗಳು ವ್ಯಕ್ತವಾಗುತ್ತಿರುವಂತೆಯೇ, ಪ್ರಕಾಶ್ ರಾಜ್ ಕೂಡಾ ಇಸ್ರೋಗೆ ಧನ್ಯವಾದ ಸಲ್ಲಿಸಿದ್ದಾರೆ.

    ಈ ಕುರಿತು ಅವರು ಟ್ವೀಟ್ ಮಾಡಿದ್ದು, ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು ಮತ್ತು ಇದನ್ನು  ಸಾಧ್ಯವಾಗಿಸಿದ ಎಲ್ಲರಿಗೂ  ಧನ್ಯವಾದಗಳು, ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು,ಇದು ದಾರಿಯಾಗಲಿ ಎಂದಿದ್ದಾರೆ.

     ನಂತರ ಸ್ಪಷ್ಟನೆ ನೀಡಿದ್ದ ಅವರು‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್​ವಾಲಾರನ್ನು ಸಂಭ್ರಮಿಸುವ ಆರ್ಮ್​ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್​ವಾಲಾ ಯಾರು?’ ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್​, ‘ನಿಮಗೆ ಜೋಕ್ ಅರ್ಥ ಆಗಲಿಲ್ಲವೆಂದರೆ ಜೋಕು ನಿಮ್ಮ ಬಗ್ಗೆಯೇ.. ಬೆಳೆಯಿರಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap