ಬೆಂಗಳೂರಿಗರಿಂದ “ಸ್ಯಾಂಕಿ ಊಳಿಸಿ” ಅಭಿಯಾನ..!

ಬೆಂಗಳೂರು: 

     ಸ್ಯಾಂಕಿ ಟ್ಯಾಂಕ್‌  ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆ ನಿಯಂತ್ರಣಕ್ಕೆ  ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆ ಹಾಗೂ ರಸ್ತೆ ವಿಸ್ತರಣೆಯನ್ನು ವಿರೋಧಿಸಿ, ಮುಖ್ಯಮಂತ್ರಿಗೆ ಪತ್ರ ಸೇರಿದಂತೆ ಮತ್ತಿತರ  ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಲ್ಲೇಶ್ವರಂ ಸತ್ತಮುತ್ತಲಿನ ನಿವಾಸಿಗಳು, ಭಾನುವಾರ ಕಪ್ಪು ಬಟ್ಟೆ ಧರಿಸಿ, ಕೆರೆಯೊಂದಿಗೆ ಸೆಲ್ಫಿ ತೆಗೆದು ‘ಸ್ಯಾಂಕಿ ಉಳಿಸಿ’ ಹ್ಯಾಷ್ ಟ್ಯಾಗ್ ನೊಂದಿಗೆ ಸಾಮಾಜಿಕ  ಜಾಲತಾಣಗಳಲ್ಲಿ ಫೋಸ್ಟ್  ಮಾಡಿದರು.

ಫ್ಲೈಓವರ್ ಟ್ರಾಫಿಕ್ ಸಮಸ್ಯೆ ಪರಿಹರಿಸುವುದಿಲ್ಲ ಮತ್ತು ಸ್ಯಾಂಕಿ ಕೆರೆ ಉದ್ದಕ್ಕೂ ಇರುವ ಮರಗಳನ್ನು ಮಾತ್ರ ನಾಶಪಡಿಸುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ನಾಗರಿಕರಲ್ಲಿ ಮಕ್ಕಳೂ ಸಹ ಕಪ್ಪು ಬಟ್ಟೆ ಧರಿಸಿ ಒಗ್ಗಟ್ಟು ಪ್ರದರ್ಶಿಸಿದರು. ಅವರು ಮುಂಜಾನೆ ಸ್ಯಾಂಕಿ ಕೆರೆಯಿಂದ  ಸ್ಯಾಂಕಿ ಟ್ಯಾಂಕ್ ಉದ್ದಕ್ಕೂ ನಡೆದು, ಮೇಲ್ಸೇತುವೆ ನಿರ್ಮಾಣದ ವಿರುದ್ಧ  ಪ್ರತಿಭಟಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap