ನಾಯಕನಹಟ್ಟಿ
ಬಸವಣ್ಣ ಮತ್ತು ಕನಕದಾಸರಿಂದ ಸಾಧ್ಯವಾಗದ ಸಾಮಾಜಿಕ ಬದಲಾವಣೆ ಅಂಬೇಡ್ಕರ್ ಅವರಿಂದ ಹೇಗೆ ಸಾಧ್ಯವಾಗಿತು ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು
ಅವರು ಘಟ ಪರ್ತಿ ಗ್ರಾಮದಲ್ಲಿ ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಮತ್ತು ಬಸವೇಶ್ವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ ಶ್ರೇತಾಯುಗ ಮತ್ತು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಮತ್ತು ಶ್ರೀರಾಮರು ಜಗತ್ತಿನ ಒಳಿತಿಗೆ ಬದುಕಿದರು ತದನಂತರ ಬಂದಂತಹ ಬಸವೇಶ್ವರ ಮತ್ತು ಕನಕದಾಸರು ಸಮಾಜದಲ್ಲಿನ ಅನಿಷ್ಟ ಗಳು ಮೌಡ್ಯಗಳು ಲಿಂಗ ತಾರತಮ್ಯತೆ ಮತ್ತು ಕಂದಾಚಾರಗಳನ್ನು ತೊಡೆದು ಹಾಕಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಆದರೆ ಶೋಷಿತ ವರ್ಗಕ್ಕೆ ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಗೌರವವಾಗಿ ಬದುಕಲು ಸಂವಿಧಾನದ ಮುಖಾಂತರ ರಕ್ಷಣೆ ಮತ್ತು ನ್ಯಾಯ ಸಿಕ್ಕಿದ್ದು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಕಾಲಮಾನದಲ್ಲಿ ಯಾವ ವ್ಯಕ್ತಿ ಸಮಾಜದ ನೋವನ್ನು ತನ್ನ ನೋವೆಂದು ಪರಿಗಣಿಸುತ್ತಾನೆ ಆಗ ಸಮಾಜದ ಬದಲಾವಣೆ ಅವನ ಮೊದಲ ಆದ್ಯತೆ ಯಾಗಿರುತ್ತದೆ ಎಂದಿಗೂ ಕೂಡ ಅವರು ಸ್ವಾರ್ಥಕ್ಕೋಸ್ಕರ ಬದುಕಲಿಲ್ಲ ಶೋಷಿತ ಸಮಾಜಕ್ಕೋಸ್ಕರ ಮತ್ತು ಮಹಿಳೆಯರಿಗೋಸ್ಕರ ಅಂಬೇಡ್ಕರ್ ಬದುಕಿದರು ಅವರು ಪೂನಾ ಒಪ್ಪಂದ ಮತ್ತು ಹಿಂದೂ ಕೋಡ್ ಬಿಲ್ಲಿನ ಪ್ರಸ್ತಾಪಕ್ಕೆ ರಾಜಿಯಾಗಿದ್ದರೆ ನಿಶ್ಚಿತವಾಗಿ ದೇಶದ ಪ್ರಧಾನಮಂತ್ರಿಯಾಗುತ್ತಿದ್ದರು ಪ್ರೀತಮ್ಮ ಜೀವನವನ್ನು ದೀಪದ ಹಾಗೆ ತನ್ನನ್ನು ತಾನು ಸಮುದಾಯಕ್ಕೆ ಸಮರ್ಪಿಸಿ ಶೋಷಿತ ಸಮುದಾಯಕ್ಕೆ ಬೆಳಕಾದರು ಅಂತಹ ನಿಸ್ವಾರ್ಥಿ ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್
12ನೇ ಶತಮಾನದಲ್ಲಿ ಸಾಮಾಜಿಕವಾಗಿ ಇಡೀ ಕ್ರಾಂತಿಯನ್ನೇ ಮಾಡಿದ ಬಸವೇಶ್ವರರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾನತೆ ಸ್ವತ್ತು ಆದಂತ ಸಂದರ್ಭದಲ್ಲಿ ಶೋಷಿತ ಸಮುದಾಯದವರೆಲ್ಲರನ್ನು ಕೂಡ ಒಟ್ಟುಗೂಡಿಸಿಕೊಂಡು ಅನುಭವ ಮಂಟಪವನ್ನು ಸ್ಥಾಪಿಸಿ ಸಂಸಾರಿ ಯಾಗಿಯೂ ಕೂಡ ಪರಮಾರ್ಥವನ್ನು ಹೇಗೆ ನಡೆಸಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟರು ಸರ್ಕಾರಿ ಸ್ವಾಮ್ಯದ ಅಧಿಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಬಸವೇಶ್ವರರು ಮತ್ತು ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಿದಲ್ಲಿ ಅವರ ಬದುಕಿಗೆ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು
ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಿಗನಹಳ್ಳಿ ಮಲ್ಲೇಶ್ ಮಾತನಾಡಿ ಅಂಬೇಡ್ಕರ್ ಅವರಂತಹ ಸಾರ್ಥಕ ಬದುಕು ನಮ್ಮೆಲ್ಲರ ದಾಗಬೇಕೆಂದರೆ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಡೀ ಸಮಾಜ ಜಾಗೃತಗೊಳ್ಳಬೇಕು ಒಳ ಮೀಸಲಾತಿಯ ಸಮಯದಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜಾತಿಯ ಹೆಸರನ್ನು ಕಡ್ಡಾಯವಾಗಿ ಎಣಿಕೆದಾರರ ಬಳಿಯಲಿ ನಮೂದಿಸಬೇಕೆಂದು ಹೇಳಿದರು
ಶಿಕ್ಷಕರಾದ ಮಲ್ಲಿಕಾರ್ಜುನ್ ಮಾತನಾಡಿ ಶೋಷಿತರಿಗೆ ಶಿಕ್ಷಣ ಒಂದೇ ಆರ್ಥಿಕ ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಇರುವಂತಹ ಮಾರ್ಗ ಎಲ್ಲಾ ತಮ್ಮ ತಮ್ಮ ಕುಟುಂಬದ ಮಕ್ಕಳಿಗೆ ಶೈಕ್ಷಣಿಕವಾಗಿ ಉನ್ನತ ಶಿಕ್ಷಣವನ್ನು ಕೊಡಿಸುವಂತಹ ಜವಾಬ್ದಾರಿ ಸಮಾಜದಾಗಿದೆ ಸಾಮಾಜಿಕವಾಗಿ ಇನ್ನು ಹೆಚ್ಚು ಹೆಚ್ಚು ಬದಲಾವಣೆ ಅಗತ್ಯ ಇದೆ ಎಂದು ಹೇಳಿದರು ತಾಲೂಕ್ ಪಂಚಾಯ್ತಿ ಮಾಜಿ ಸದಸ್ಯ ಚಂದ್ರಣ್ಣ ಗ್ರಾಮ ಪಂಚಾಯಿತಿ ಸದಸ್ಯರಾದಂತಹ ವೀರಭದ್ರಪ್ಪ, ರವಿ, ಮಾತನಾಡಿದರು ಸಮಾರಂಭದಲ್ಲಿ ತಿಮ್ಮಣ್ಣ ತಿಪ್ಪೇಸ್ವಾಮಿ ಹೊನ್ನೂರ್ ಮಾರಣ್ಣ ಪ್ರಕಾಶ್ ರೆಡ್ಡಿ ಮತ್ತಿತರು ಉಪಸ್ಥಿತರಿದ್ದರು
