ರಾಯಬರೇಲಿ:
ಸಂವಿಧಾನ ರಚನೆಗೆ ದಲಿತರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಇದು ನಿಮ್ಮ ಸಿದ್ಧಾಂತ, ಆದರೆ ನೀವು ಈಗ ಎಲ್ಲಿಗೆ ಹೋದರೂ ನೀವು ವ್ಯವಸ್ಥೆಯಿಂದ ತುಳಿತಕ್ಕೊಳಗಾಗಿದ್ದೀರಿ’ ಎಂದು ಹೇಳಿದರು.ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಯಬರೇಲಿ ಸಂಸದ ಇಲ್ಲಿನ ಬರ್ಗಡ್ ಚೌರಾಹಾ ಬಳಿಯ ‘ಮೂಲ ಭಾರತಿ’ ಹಾಸ್ಟೆಲ್ನ ದಲಿತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ರಾಹುಲ್ ಗಾಂಧಿ ಅವರ ಜೊತೆ ಕಾಂಗ್ರೆಸ್ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ ಮತ್ತು ಪಕ್ಷದ ಇತರ ಮುಖಂಡರು ಇದ್ದರು.’ದೊಡ್ಡ 500′ ಸಂಸ್ಥೆಗಳ ಭಾಗವಾಗಿರುವ ಕೆಲವು ಉನ್ನತ ಖಾಸಗಿ ಕಂಪನಿಗಳನ್ನು ಹೆಸರಿಸಿದ ರಾಹುಲ್, ಅದರಲ್ಲಿ ಎಷ್ಟು ದಲಿತರು ಆ ಕಂಪನಿಗಳ ಚುಕ್ಕಾಣಿ ಹಿಡಿದಿದ್ದಾರೆ ಎಂದು ಯುವಕರನ್ನು ಪ್ರಶ್ನಿಸಿದರು. ಆಗ ಓರ್ವ ವಿದ್ಯಾರ್ಥಿ ‘ಯಾರೂ ಇಲ್ಲ’ ಎಂದು ಪ್ರತಿಕ್ರಿಯಿಸಿದಾಗ, ‘ಏಕೆ’ ಎಂದು ರಾಹುಲ್ ಗಾಂಧಿ ಅತನನ್ನು ಪ್ರಶ್ನಿಸಿದರು. ಆಗ ಮತ್ತೊಬ್ಬ ವಿದ್ಯಾರ್ಥಿ, ‘ನಮಗೆ ಸೂಕ್ತ ಸೌಲಭ್ಯಗಳಿಲ್ಲದ ಕಾರಣ’ ಎಂದು ಉತ್ತರಿಸಿದರು.
ಅದನ್ನು ಒಪ್ಪಿಕೊಳ್ಳದ ರಾಹುಲ್ ಗಾಂಧಿ, ಡಾ. ಬಿಆರ್ ಅಂಬೇಡ್ಕರ್ ಜಿ ಕೂಡ ಯಾವುದೇ ಸೌಲಭ್ಯವನ್ನು ಹೊಂದಿರಲಿಲ್ಲ. ಅವರು ತಮ್ಮ ಪ್ರಯತ್ನದಲ್ಲಿ ಏಕಾಂಗಿಯಾಗಿದ್ದರೂ ಕೂಡ ಅವರು ದೇಶದ ರಾಜಕೀಯವನ್ನು ಅಲ್ಲಾಡಿಸಿದರು’ ಎಂದರು.
ಇಡೀ ವ್ಯವಸ್ಥೆಯು ನಿಮ್ಮ ವಿರುದ್ಧವಾಗಿದೆ ಮತ್ತು ನೀವು ಏಳಿಗೆ ಕಾಣುವುದನ್ನು ಅದು ಬಯಸುವುದಿಲ್ಲ. ಈ ವ್ಯವಸ್ಥೆಯು ಪ್ರತಿದಿನ ನಿಮ್ಮ ಮೇಲೆ ದಾಳಿ ಮಾಡುತ್ತದೆ ಮತ್ತು ಅರ್ಧದಷ್ಟು ಸಮಯ ಅದು ನಿಮ್ಮ ಮೇಲೆ ಹೇಗೆ ದಾಳಿ ಮಾಡಿತು ಎಂಬುದು ಕೂಡ ನಿಮಗೆ ತಿಳಿದಿರುವುದಿಲ್ಲ’ ಎಂದು ಹೇಳಿದರು.
‘ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರು ಇಲ್ಲದಿದ್ದರೆ, ಸಂವಿಧಾನ ಬರುತ್ತಿರಲಿಲ್ಲ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಇದು ನಿಮ್ಮ ಸಿದ್ಧಾಂತ, ಇದು ನಿಮ್ಮ ಸಂವಿಧಾನ ಆದರೆ ನೀವು ಈಗ ಎಲ್ಲಿಗೆ ಹೋದರೂ ವ್ಯವಸ್ಥೆಯಿಂದ ತುಳಿತಕ್ಕೊಳಗಾಗಿದ್ದೀರಿ’ ಎಂದು ರಾಹುಲ್ ತಿಳಿಸಿದರು.ರಾಹುಲ್ ಗಾಂಧಿಯವರು ಇಂದಿನಿಂದ ತಮ್ಮ ಸಂಸದೀಯ ಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.
