ಇಂದು ಮಧ್ಯಾಹ್ನ 1ಕ್ಕೆ ರಾಹುಲ್‌ ಗಾಂಧಿ ಪತ್ರಿಕಾಗೋಷ್ಠಿ..!

ನವದೆಹಲಿ:

        ಲೋಕಸಭೆಯಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಧ್ಯಾಹ್ನ 1 ಗಂಟೆಗೆ  ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.  .

        ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ಶ್ರೀ ಗಾಂಧಿ ಅವರು ತಮ್ಮ ಸಂಸದ ಸ್ಥಾನಮಾನವನ್ನು ಕಳೆದುಕೊಂಡರು ಮತ್ತು ಗುರುವಾರ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಕೂಡ ಕೋರ್ಟ್‌ ವಿಧಿಸಿತ್ತು .

    ಅನರ್ಹತೆಯ ನಂತರ ತಮ್ಮ ಮೊದಲ ಕಾಮೆಂಟ್‌ಗಳಲ್ಲಿ, ಮಾಜಿ ವಯನಾಡ್ ಸಂಸದರು “ಯಾವುದೇ ಬೆಲೆ ತೆರಲು” ಸಿದ್ಧ ಎಂದು ಹೇಳಿದರು. “ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ಧ” ಎಂದು ಶ್ರೀ ಗಾಂಧಿ ನಿನ್ನೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.ಮಾಜಿ ಕಾಂಗ್ರೆಸ್ ಮುಖ್ಯಸ್ಥರ ವಯನಾಡ್ ಸ್ಥಾನವೂ ಅವರ ಅನರ್ಹತೆಯ ನಂತರ ತೆರವಾಯಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap