ತುಮಕೂರು:
ಸಿದ್ದಾರ್ಥ ಹಾರ್ಟ್ ಕೇರ್ ಸೆಂಟರ್ನಲ್ಲಿ ಅಪರೂಪದ ಕೀಹೋಲ್ ಹಾರ್ಟ್ ಸರ್ಜರಿಯನ್ನು ಯಶಸ್ವಿ ಯಾಗಿ ನೆರವೇರಿಸಲಾಗಿದೆ.ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಾರ್ಟ್ ಕೇರ್ ಸೆಂಟರ್ ಮುಖ್ಯಸ್ಥ ಡಾ. ತಮೀಮ್ ಅಹಮದ್ ಅವರು ಆಸ್ಪತ್ರೆ ಮುಖ್ಯ ಸ್ಥರಾದ ಡಾ. ಜಿ. ಪರಮೇಶ್ವರ ಅವರ ಸಹಕಾರ ಪ್ರೋತ್ಸಾಹ ದೊಂದಿಗೆ ತುಮಕೂರು ಜಿಲ್ಲೆಯ ಬೆಳ್ಳಾವಿಯ ಸಾಮಾನ್ಯ ರೈತರಿಗೆ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದು.
ಮುಸ್ಲಿಮರು ಆರ್ಥಿಕ ಬಹಿಷ್ಕಾರ ಹಾಕಿದರೆ ಹಿಂದೂಗಳಿಗೇ ತೊಂದರೆ; ಉಡುಪಿ ಮುಸ್ಲಿಂ ಮುಖಂಡರು
ಹಾರ್ಟ್ ಬೀಟ್ಸ್ ಮೂಲಕ ಒಂದು ಉಸಿರಾಟ ದೊಂದಿಗೆ ಬೈಪಾಸ್ ಸರ್ಜರಿ ಮಾಡಲಾಗಿದೆ ಎಂದು ವಿವರಿಸಿದರು.
ರೈತ ಶಿವಕುಮಾರ್ ಮಾತನಾಡಿ ಆಸ್ಪತ್ರೆ ವೈದ್ಯರ ತಂಡ ಧೈರ್ಯ ತುಂಬಿ ಈ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಮೊದಲಿನಂತೆ ಆರೋಗ್ಯ ಸುಧಾರಿಸುತ್ತದೆ. ಇದಕ್ಕೆ ಇಡೀ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಡಾ. ಪ್ರಭಾಕರ್, ಡಾ. ಮಹಾಪಾತ್ರ, ಡಾ. ಪಿ. ಕೆ. ದೇವದಾಸ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/03/WhatsApp-Image-2022-03-23-at-12.48.24-PM.jpeg)