ಆರ್ಥಿಕತೆ ಪುನಶ್ಚೇತನಕ್ಕೆ ಆರ್.ಬಿ.ಐ.ನಿಂದ ಮಹತ್ವದ ಘೋಷಣೆ!!

ನವದೆಹಲಿ :

      ದೇಶದ ಅರ್ಥವ್ಯವಸ್ಥೆ ಚೇತರಿಕೆಗೆ ಆರ್.ಬಿ.ಐ ನಿಂದ ಇಂದು ಕೆಲವು ಮಹತ್ವದ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

      ಇಂದು ಸುದ್ದಿಗೋಷ್ಟಿ ನಡೆಸಿದ ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್, ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ದೇಶದ ಆರ್ಥಿಕತೆ ತೀವ್ರ ಹೊಡೆತ ಕೊಟ್ಟಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ಹಾಗೂ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಹಲವು ಘೋಷಣೆಗಳನ್ನು ಮಾಡಲಾಗಿದೆ. 

ಆರ್ಥಿಕತೆ ಪುನಶ್ಚೇತನಕ್ಕೆ ಆರ್.ಬಿ.ಐನಿಂದ ಮಹತ್ವದ ಘೋಷಣೆಗಳು :

  • ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 50 ಸಾವಿರ ಕೋಟಿ ಮೀಸಲು.
  • ನಬಾರ್ಡ್ ಗೆ 25 ಸಾವಿರ ಕೋಟಿ ನೀಡಲಾಗುತ್ತಿದೆ.
  • ನಬಾರ್ಡ್ 25 ಸಾವಿರ ಕೋಟಿ ಮೀಸಲಿಡಲಾಗಿದೆ.
  • ಸಿಐಡಿಬಿಐ- ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಗೆ 15 ಸಾವಿರ ಕೋಟಿ ಮೀಸಲು.
  • ನ್ಯಾಶನಲ್ ಹೌಸಿಂಗ್ ಬ್ಯಾಂಕ್ ಗೆ 10 ಸಾವಿರ ಕೋಟಿ ಮೀಸಲು.
  • ಕೊರೊನಾ ವಿರುದ್ಧ ಹೋರಾಟಕ್ಕೆ ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ.
  • ರಿವರ್ಸ್ ರೆಪೋ ದರ ಬೇಸಿಕ್ 25 ಪಾಯಿಂಟ್ ಕಡಿತ .
  • ರಿವರ್ಸ್ ರೆಪೋ ದರ ಶೇ.3.75ರಷ್ಟು ಇಳಿಕೆ.
  • ಇದರಿಂದ ಆರ್.ಬಿ.ಐನಿಂದ ಬ್ಯಾಂಕ್ ಗಳಿಗೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.
  • ಬ್ಯಾಂಕ್ ಗಳು ಲಾಭದ ಅಂಶವನ್ನು ಘೋಷಣೆ ಮಾಡುವ ಅಗತ್ಯವಿಲ್ಲ.
  • 3 ತಿಂಗಳ ಕಾಲ ಎನ್ ಪಿ.ಎ ನಿಯಮ ಅನ್ವಯಿಸುವುದಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link