ಶಾಸಕರ ಖರೀದಿಗೆ ಹಣ: SITಗೆ ನೀಡಲಿ : ರೇಣುಕಾಚಾರ್ಯ

ದಾವಣಗೆರೆ:

    ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು 50 ಶಾಸಕರ ಖರೀದಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿದೆ ಎಂಬ ವಿಚಾರವನ್ನು ದೇವರ ಸನ್ನಿಧಾನದಲ್ಲಿ ಪ್ರಮಾಣ ಮಾಡಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೂರಾರು ಕೋಟಿ ಖರ್ಚು ಮಾಡಿ ಕೈ ಶಾಸಕರ ಖರೀದಿ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಆರೋಪ ಸತ್ಯ ಆದರೆ ಧರ್ಮಸ್ಥಳ, ನಡುವಿನಕೆರೆ ಅಜ್ಜಯ್ಯ ಅಥವಾ ಚಾಮುಂಡಿ ಸನ್ನಿಧಾನದಲ್ಲಿ ಅವರು ಪ್ರಮಾಣ ಮಾಡಲಿ ಎಂದರು.

   ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಮುಚ್ಚಿ, ರಾಜ್ಯದ ಜನರ ಗಮನ ಬೇರೆ ಕಡೆ ಸೆಳೆಯಲು ಕೋವಿಡ್ ಹಗರಣ ಮುಚ್ಚಿ ಹಾಕಲು, ಈ ರೀತಿಯ ಅರಿಬಿ ಹಾವು ಬಿಡುತ್ತಿದ್ದಾರೆ. ಒಂದು ವೇಳೆ ಇದು ನಿಜ ಆದರೆ ಎಸ್.ಐ.ಟಿ. ತನಿಖೆ ನಡೆಸಲಿ. ಇಡಿ ಗೆ ಕೊಡಲಿ ಎಂದರು.ಜಮೀರ್ ಅಹಮ್ಮದ್ ಮಂಗ್ಯಾ ಮಾಡಿದ ಹಾಗೆ ಮಾಡುತ್ತಿದ್ದು ತಕ್ಷಣ ಅವರನ್ನು ಅಮಾನತು ಮಾಡಲಿ ಎಂದು ಅವರು ಆಗ್ರಹಿಸಿದರು.

Recent Articles

spot_img

Related Stories

Share via
Copy link