ಕೇರಳ :
ತಿಂಗಳ ಐದು ದಿನಗಳ ಪೂಜೆ ನೆರವೇರಿಸಲು ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಾಗಿದೆ.
ಮಲಯಾಳಂ ಪಂಚಾಗದ ಮೊದಲ ತಿಂಗಳು (ಆಗಸ್ಟ್) ಚಿಂಗಾಮ್ ನಲ್ಲಿ 5 ದಿನಗಳ ಕಾಲ ಪೂಜೆ ನಡೆಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಭಕ್ತಾಧಿಗಳಿಗೆ ಶಬರಿಮಲೆಗೆ ಭೇಟಿಗೆ ಅವಕಾಶ ನೀಡಲಾಗಿದೆ.
ಆದರೆ ಯಾರು ದೇವಾಲಯಕ್ಕೆ ಭೇಟಿ ನೀಡುತ್ತಾರೋ ಅವರ ಬಳಿ ಕೋವಿಡ್ 19 ನೆಗೆಟಿವ್ ಸರ್ಟಿಪಿಕೆಟ್ ಅಗತ್ಯವಾಗಿ ಇರಬೇಕು. ತಿಂಗಳ ಪೂಜೆ ಆಗಸ್ಟ್ 21ರ ಸಂಜೆ ಮುಗಿದ ನಂತರ ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ದೇವಸ್ವಂ ಮಂಡಳಿ ಹೇಳಿದೆ.
ಅಯ್ಯಪ್ಪ ದೇವಾಲಯ ಮತ್ತೆ ಓಣಂ ಪೂಜೆಗಾಗಿ ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ಬಾಗಿಲು ತೆರೆಯಲಿದೆ. ನವೆಂಬರ್ 16ರಿಂದ ಭಕ್ತಾದಿಗಳಿಗೆ ಎರಡು ತಿಂಗಳ ಕಾಲ ದೇಗುಲ ತೆರೆಯಲಿದೆ. ಆಗಲೂ ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು ಎಂಬುದನ್ನು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗುತ್ತದೆ.
ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವು ತಿಂಗಳಿನಿಂದ ಪೂಜೆಗಳು ಸ್ಥಗಿತಗೊಂಡಿತ್ತು. ತಿಂಗಳ ಪೂಜೆಗೆ ಮಾತ್ರ ದೇವಾಲಯ ಬಾಗಿಲು ತೆರೆಯಲಾಗುತ್ತಿತ್ತು. ಆದರೆ, ಭಕ್ತಾದಿಗಳಿಗೆ ದೇವಾಲಯಕ್ಕೆ ಇದುವರೆಗೂ ಪ್ರವೇಶ ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Shabari-male.jpg)