ತುಮಕೂರು : ಶ್ರೀಗಂಧ ಕಳ್ಳ ಸಾಗಣೆ ; ಮೂವರ ಬಂಧನ!!

  ತುಮಕೂರು :

      ಕುಣಿಗಲ್ ತಾಲ್ಲೂಕಿನ ಮಾದುಗೋನಹಳ್ಳಿ ಗ್ರಾಮದ ಹಳ್ಳದ ಬಳಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಂಪಯ್ಯ, ಪಾಮಯ್ಯ ಹಾಗೂ ಮುನಿರಾಜು ಎಂಬುವರನ್ನು ಕುಣಿಗಲ್ ಅರಣ್ಯ ಇಲಾಖಾ ಸಿಬ್ಬಂದಿಗಳು ಬಂಧಿಸಿದ್ದಾರೆ.

       ಆರೋಪಿಗಳಿಂದ ಸುಮಾರು 8 ಕೆ.ಜಿ. ಶ್ರೀಗಂಧದ ತುಂಡಗಳು, ಒಂದು ಮಚ್ಚು, ಟಾರ್ಚ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದಾಳಿಯಲ್ಲಿ ಉಜ್ಜನಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಆರ್.ಮಹೇಶ್, ಅರಣ್ಯ ರಕ್ಷಕ ಆರ್.ಮಹೇಶ್, ಶೇಖರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap