ಪುನೀತ್ ರಾಜ್​ಕುಮಾರ್​ ಬಯೋಪಿಕ್ ಪ್ಲ್ಯಾನ್ ಬಗ್ಗೆ ಮಾತಾಡಿದ ಸಂತೋಷ್ ಆನಂದ್​ರಾಮ್

ಬೆಂಗಳೂರು :

    ನಟ ಪುನೀತ್ ರಾಜ್​ಕುಮಾರ್​ ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಭೌತಿಕವಾಗಿ ಇಲ್ಲದಿದ್ದರೂ ಕೂಡ ಫ್ಯಾನ್ಸ್ ಮನದಲ್ಲಿ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ. ಇಂದು (ಮಾರ್ಚ್​ 14) ಪುನೀತ್ ನಟನೆಯ ‘ಅಪ್ಪು’ ಸಿನಿಮಾ ಮರು ಬಿಡುಗಡೆ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಬಂದು ಸಿನಿಮಾ ನೋಡುತ್ತಿದ್ದಾರೆ.

    ಪುನೀತ್ ಜೊತೆ ಹೆಚ್ಚು ಆಪ್ತತೆ ಹೊಂದಿದ್ದ ನಿರ್ದೇಶಕ ಸಂತೋಷ್ ಆನಂದ್​ರಾಮ್  ಅವರು ಕೂಡ ‘ಅಪ್ಪು’ ಚಿತ್ರ ನೋಡಲು ಬಂದಿದ್ದಾರೆ. ಈ ವೇಳೆ ಟಿವಿ9 ಜೊತೆ ಮಾತನಾಡಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರ ಬಯೋಪಿಕ್  ಮಾಡುವ ಕುರಿತು ಸಂತೋಷ್ ಆನಂದ್​ರಾಮ್ ಮಾತನಾಡಿದ್ದಾರೆ.

   ‘ಇಂದು ಎಐ ಟೆಕ್ನಾಲಜಿ ಇದೆ. ಮುಂದಿನ ದಿನಗಳಲ್ಲಿ ಆ ದೇವರು ಅವಕಾಶ ಕೊಟ್ಟರೆ, ಅಪ್ಪು ಅವರ ಚರಿತ್ರೆಯನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ನಾನು ಮಾಡಬೇಕು ಎಂಬುದನ್ನು ಈಗ ತುಂಬ ಗಂಭೀರವಾಗಿ ಪರಿಗಣಿಸಿದ್ದೇನೆ. ಹೊಂಬಾಳೆ ಫಿಲ್ಮ್ಸ್​ ಮೂಲಕ ನಾನು ಮತ್ತು ಪುನೀತ್ ಅವರು 5 ಸಿನಿಮಾ ಮಾಡಬೇಕು ಅಂತ ಪ್ಲ್ಯಾನ್ ಆಗಿತ್ತು. ಮಾಡಿದ್ದರೆ ರೆಕಾರ್ಡ್ ಆಗುತ್ತಿತ್ತು. ಮೂರು ಮತ್ತು ನಾಲ್ಕನೇ ಸಿನಿಮಾಗೆ ಕಮಿಟ್ ಕೂಡ ಆಗಿದ್ದೆವು. ಆದರೆ ದೇವರ ಆಟ ಬೇರೆಯೇ ಇತ್ತು’ ಎಂದು ಸಂತೋಷ್ ಆನಂದ್​ರಾಮ್ ಹೇಳಿದ್ದಾರೆ.

Recent Articles

spot_img

Related Stories

Share via
Copy link