ಚರಂಡಿ ಕಾಮಗಾರಿ : ವಾತಾವರಣ ದೂಳುಮಯ

ಮಧುಗಿರಿ:

ಪುರಸಭೆ ಮುಂಭಾಗವಿರುವ ಎಂಜಿಎಂ ಶಾಲಾ ಮುಂಭಾಗ ಚರಂಡಿ ನಿರ್ಮಾಣ ಕಾಮಗಾರಿ ನಡೆದಿದ್ದು, ಮಣ್ಣನ್ನು ಎತ್ತಿಸದೆ ಅಲ್ಲಿಯೆ ಬಿಟ್ಟಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೂ ಮತ್ತು ಸಾರ್ವಜನಿಕರಿಗೂ ತುಂಬಾ ತೊಂದರೆಯುಂಟಾಗುತ್ತಿದ್ದು, ದೂಳು ಕುಡಿದು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂಬ ಹಿನ್ನಲೆಯಲ್ಲಿ ಸಮೀಪದಲ್ಲೇ ಇದ್ದ ರಾಮಕೃಷ್ಣಾಶ್ರಮದ ನಿರ್ಮಲಾನಂದ ಸ್ವಾಮೀಜಿಯವರು ಪುರಸಭಾ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಪುರಸಭೆ ವತಿಯಿಂದ ಕಂದಾಯ, ಅಂಗಡಿ ಲೈಸೆನ್ಸ್ ಗಳು ಮತ್ತಿತರ ಪರವಾನಗಿಗಳ ಬಗ್ಗೆ ಮುಖ್ಯಾಧಿಕಾರಿ ನಜ್ಮಾ ಅವರ ನೇತೃತ್ವದಲ್ಲಿ ತಂಡವೊಂದು ಪಟ್ಟಣದಲ್ಲಿ ನಡೆದು ಹೋಗುತ್ತಿದ್ದಾಗ ರಾಮಕೃಷ್ಣಾಶ್ರಮದ ಸ್ವಾಮೀಜಿ ತಡೆದು ಪ್ರಶ್ನೆ ಮಾಡಿದ್ದಾರೆ.

ಬೀದಿಬದಿ ವ್ಯಾಪಾರ ಮಾಡುತ್ತಿರುವವರನ್ನು ನೀವು ಪ್ರಶ್ನಿಸುತ್ತಿದ್ದೀರಿ. ಹಣ ಬಲ ಉಳ್ಳವರನ್ನು ನೀವೇನು ಪ್ರಶ್ನಿಸುವುದಿಲ್ಲ. ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯ ಎಂದು ಗಟ್ಟಿಧ್ವನಿಯಲ್ಲಿ ಪ್ರಶ್ನಿಸಿದರು. ಈ ವೇಳೆ ಪೆÇಲೀಸರು ಆಗಮಿಸಿ ಅವರ ಅಹವಾಲನ್ನು ಸ್ವೀಕರಿಸಿ ಕಳುಹಿಸಿದ ಘಟನೆ ನಡೆಯಿತು.

ಮುಖ್ಯಾಧಿಕಾರಿಗಳು ಕೇವಲ ಇ-ಸ್ವತ್ತಿನ ನಿವೇಶನಗಳಿಗೆ ಮಾತ್ರ ಖಾತೆ ಮಾಡಿಕೊಡಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ ಇವರ ತಂಡದ ಕೆಲ ಅಧಿಕಾರಿಗಳು ಸಾವಿರಾರುಗಟ್ಟಲೆ ಲಂಚದ ರೂಪದಲ್ಲಿ ಹಣ ಪಡೆದುಕೊಂಡು ದಾಖಲೆ ಸರಿಯಿಲ್ಲದ ಕೆಲ ನಿವೇಶನಗಳಿಗೆ ಇ-ಖಾತೆಯನ್ನು ಮಾಡಿಕೊಡುತ್ತಿರುವುದು ಮುಖ್ಯಾಧಿಕಾರಿಗಳಿಗೆ ಕಾಣುತ್ತಿಲ್ಲವೆ?

ತಾತ ಮುತ್ತಾತನ ಕಾಲದಿಂದ ಬಂದಂತಹ ಆಸ್ತಿಗಳಿಗೆ ಖಾತೆಗಳು ಆಗದೆ ಹಲವಾರು ತಿಂಗಳುಗಳಿಂದ ಫೈಲ್‍ಗಳು ಧೂಳು ಹಿಡಿಯುತ್ತಿವೆ. ನಾವು ಯಾರ ಹೆಸರಿಗೆ ಕಂದಾಯ ಪಾವತಿ ಮಾಡುವುದೊ ಗೊತ್ತಾಗುತ್ತಿಲ್ಲ. ಇಂತಹ ಕೆಲ ಅಧಿಕಾರಿಗಳಿಂದಾಗಿ ಪಟ್ಟಣದ ಅಭಿವೃದ್ಧಿಯು ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಗುಸು ಗುಸು ಮಾತನಾಡುತ್ತಿದ್ದುದು ಕೂಡ ಕಂಡು ಬಂದಿತು.

ಈ ವೇಳೆ ಹಾಜರಿದ್ದ ಪುರಸಭಾ ಮುಖ್ಯಾಧಿಕಾರಿಗಳು ಮತ್ತು ತಂಡ ಮೂಕ ಪ್ರೇಕ್ಷಕರಂತೆ ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಈ ಬಗ್ಗೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ಕ್ರಮ ವಹಿಸುತ್ತಾರೆ ಎಂದು ಹೇಳಿ ಜಾಗ ಖಾಲಿ ಮಾಡಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link