ಶಿವಮೊಗ್ಗ : ಗರ್ಭಿಣಿ ಆನೆ ಬಾಲ ಕತ್ತರಿಸಿದ ದುಷ್ಕರ್ಮಿಗಳು

ಶಿವಮೊಗ್ಗ​: 

     ಸಕ್ರೆಬೈಲು ಆನೆ ಶಿಬಿರದಲ್ಲಿ ದುಷ್ಕರ್ಮಿಗಳು ಆನೆಯ ಮೇಲೆ ದಾಳಿ ಮಾಡಿ ಬಾಲವನ್ನು ತುಂಡರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗಳು ಭಾನುಮತಿ ಎಂಬ 18 ತಿಂಗಳ ಗರ್ಭಿಣಿ ಆನೆಯ ಮೇಲೆ ದಾಳಿ ಮಾಡಿದ್ದರು. ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಸಿಬ್ಬಂದಿ ಶಿಬಿರದ ಆವರಣದಲ್ಲಿ ಆನೆಯನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ದುಷ್ಕರ್ಮಿಗಳು ಈ ಕುಕೃತ್ಯ ಎಸಗಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.

    ನೆಲದ ಮೇಲೆ ರಕ್ತ ಚಿಮ್ಮುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಆನೆ ಬಳಿ ಬಂದು ನೋಡಿದಾಗ ಬಾಲ ತುಂಡಾಗಿತ್ತು. ಆರೋಪಿಗಳು ಹರಿತವಾದ ಆಯುಧದಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೆಯ ಬಾಲವನ್ನು ಅರ್ಧ ಇಂಚು ಕತ್ತರಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಪ್ರಸನ್ನ ಕೃಷ್ಣ ಪಟಗಾರ ತಿಳಿಸಿದ್ದಾರೆ.

    ಸಕ್ರೆಬೈಲು ಆನೆ ಶಿಬಿರವು ಖೆಡ್ಡಾಕ್ಕೆ ಬಿಳಿಸಿದ ಆನೆಗಳನ್ನು ಪಳಗಿಸುವ ಅರಣ್ಯ ಶಿಬಿರವಾಗಿದೆ. ಶಿವಮೊಗ್ಗದಿಂದ 14 ಕಿ.ಮೀ ದೂರದಲ್ಲಿರುವ ಇದು ರಾಜ್ಯದ ಆನೆಗಳಿಗೆ ತರಬೇತಿ ನೀಡುವ ಅತ್ಯುತ್ತಮ ಶಿಬಿರ ಎಂದು ಪರಿಗಣಿಸಲಾಗಿದೆ.
    ಕರ್ನಾಟಕ ಅರಣ್ಯ ಇಲಾಖೆಯು ನಿರ್ವಹಿಸುತ್ತಿರುವ ಶಿಬಿರವು ವನ್ಯಜೀವಿ ಪ್ರೇಮಿಗಳನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಕರ್ನಾಟಕದ ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿದೆ, ಇದು ಸಾಮಾನ್ಯ ಜನರಿಗೆ ದೊಡ್ಡ ಆನೆಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap