ಶೋಭಿತಾ ಶಿವಣ್ಣ ಪ್ರಕರಣದ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಸಂಬಂಧಿ

ಬೆಂಗಳೂರು :

   ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿ ವಿಜಯ್ ಎನ್ನುವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ವಿಜಯ್ ಅವರು, ಶೋಭಿತಾ ಶಿವಣ್ಣ ಹೇಗೆ ಕೊನೆಯುಸಿರೆಳೆದರು ಎನ್ನುವ ಕಾರಣ ಅವರ ಗಂಡ ಸುಧೀರ್ಗೂ ಗೊತ್ತಿಲ್ಲ. ಅವರೇ ಹೋಗಿ ಬಾಗಿಲು ಮುರಿದು ನೋಡಿ ಫುಲ್ ಶಾಕ್ ಆಗಿದ್ದರು ಎಂದು ಹೇಳಿದ್ದಾರೆ.

  ನಟಿ ಶೋಭಿತಾ ಶಿವಣ್ಣ ಅವರು ರಾತ್ರಿ ತಮ್ಮ ಕುಟುಂಬದ ಜೊತೆ ಮಾತಾಡಿದ್ದರು. ರಾತ್ರಿ ಗಂಡ-ಹೆಂಡತಿ ಇಬ್ಬರು ಊಟ ಮಾಡಿದ್ದರು. ಸುಧೀರ್ ಹಾಗೂ ಶೋಭಿತಾ ಬೇರೆ ಬೇರೆ ರೂಮ್ನಲ್ಲಿದ್ದರು. ಆಫೀಸ್ ಕೆಲಸ ಮಾಡುತ್ತಲೇ ಸುಧೀರ್ ಹಾಗೆ ನಿದ್ದೆಗೆ ಜಾರಿದ್ದರು. ರಾತ್ರಿ ಶೋಭಿತಾ ತಮ್ಮ ಸಹೋದರಿ ಬಳಿ ಫೋನ್ನಲ್ಲಿ ಮಾತಾಡುತ್ತಿರುವುದನ್ನ ಸಧೀರ್ ಕೇಳಿಸಿಕೊಂಡಿದ್ದನು ಎಂದು ಹೇಳಿದ್ದಾರೆ.

  ಮುಂಜಾನೆ 8 ಗಂಟೆಗೆ ಮನೆ ಕೆಲಸದಾಕೆ ಬಂದು ಶೋಭಿತಾ ಬಾಗಿಲು ತೆಗೆಯುತ್ತಿಲ್ಲ ಎಂದು ಸುಧೀರ್ ಬಳಿ ಹೇಳಿದ್ದಾಳೆ. ಸುಮಾರು ಅರ್ಧ ಗಂಟೆ ಶೋಭಿತಾ ರೂಮ್ ಬಾಗಿಲು ತೆಗೆಯಲು ಗಂಡ ಸುಧೀರ್ ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಹೀಗಾಗಿಯೇ ಗಾಬರಿಗೊಂಡು ಅದೇ ಅಪಾರ್ಟ್ಮೆಂಟ್ನಲ್ಲಿದ್ದ ಸ್ನೇಹಿತರು ಹಾಗೂ ಸಂಬಂಧಿಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆ ನಂತರ ರೂಮ್ ಬಾಗಿಲನ್ನು ಗಂಡ ಮುರಿದು ಹಾಕಿ ಒಳಗೆ ನೋಡಿ ಶಾಕ್ ಆಗಿದ್ದಾನೆ.

   ರೂಮ್ ಒಳಗೆ ಶೋಭಿತಾ ಅವರು ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಖುದ್ದು ಪತಿ ಸುಧೀರ್ ಅವರೇ ಮಾಹಿತಿ ನೀಡಿದ್ದಾರೆ. ಶೋಭಿತಾ ಸಾವಿನ ಬಗ್ಗೆ ಸುಧೀರ್ಗೂ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ವಿಜಯ್ ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link