ಕೋಲಾರವೇ ಏಕೆ ?? : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು

      ಮುಂಬರುವ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಶ್ರೀ ಸಿದ್ದರಾಮಯ್ಯರವರು  ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವ ಎಲ್ಲಾ ಲಕ್ಷಣಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಆಗಾಗ ಸಿದ್ದರಾಮಯ್ಯನವರು ಕೋಲಾರ ಪ್ರವಾಸ ಕೈಗೊಳ್ಳುತ್ತಿದ್ದಾರೆ ಇದರ ಕುರಿತಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಮತ್ತು ರಾಜಕೀಯ ಟೀಕಾಕಾರರಿಗೆ ಒಂದೇ ಮಾತಿನಲ್ಲಿ ಉತ್ತರಿಸಿ ತಮ್ಮ ಜಾಣ್ಮೆ ಮೆರೆದಿದ್ದಾರೆ. 

   ಫೆ.5ರಂದು ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯರವರು ಮಾತನಾಡುವಾಗ ನನ್ನನ್ನು ಎಲ್ಲರು ಸಹ  ಕೋಲಾರ ಕ್ಷೇತ್ರವೇ ಏಕೆ? ಎಂದು ಕೇಳುತ್ತಾರೆ ಏಕೆಂದರೆ ಜನಸೇವಕನಿಗೆ ಜಾಗ ಯಾವುದಾದರೇನು ಜನ ನಮ್ಮವರೇ ಎಂದಿದ್ದಾರೆ.ಇದೇ ಸಂದರ್ಭದಲ್ಲಿ “ಚಾಮುಂಡೇಶ್ವರಿಯಲ್ಲಿ ಸೋಲಿನ ಸುಳಿವು ಸಿಕ್ಕಿದ್ದರಿಂದಲೇ ಬಾದಾಮಿಯಲ್ಲಿ ಕಣಕ್ಕಿಳಿದೆ” ಎಂದು ಹಿಂದಿನ ಚುನಾವಣೆ ಕಹಿ ನೆನಪನ್ನು ಸಹ ನೆನಪಿಸಿಕೊಂಡರು. “ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ತಂದು ಕೊಡುತ್ತೀವಿ ಎಂದು ಹೇಳುತ್ತಿದ್ದಾರೆ. ಅಲ್ಲಿನ ಜನ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರು ನನ್ನನ್ನು ಸೋಲಿಸಲ್ಲ” ಎಂದರು.

  ಇನ್ನು ಕೋಲಾರವೇ ಏಕೆ ಎಂದರೆ ಜನರ ಜೊತೆ ಬೆರೆಯಲು  “ಹತ್ತಿರ ಎನ್ನುವ ಕಾರಣಕ್ಕೆ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹೈಕಮಾಂಡ್ ಫೈನಲ್ ಮಾಡಿದರೆ ನೂರಕ್ಕೆ ನೂರರಷ್ಟು ಕೋಲಾರದಲ್ಲಿ ಗೆಲ್ಲುತ್ತೇನೆ” ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap