ಸಿದ್ಧಗಂಗೆ ಜಾತ್ರೆ: ಬಹುಮಾನಿತ ರಾಸುಗಳ ಆಯ್ಕೆ

ತುಮಕೂರು:

ಐತಿಹಾಸಿಕ ಪ್ರಸಿದ್ದ ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ಕೊಡ ಮಾಡುವ ಬಹುಮಾನಕ್ಕಾಗಿ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಕಳೆದ ಒಂದು ವಾರದಿಂದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದನಗಳ ಜಾತ್ರೆ ನಡೆಯುತ್ತಿದ್ದು, ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ನಡೆಸಿಕೊಂಡು ಬಂದಿರುವ ಉತ್ತಮ ರಾಸುಗಳಿಗೆ ಬಹುಮಾನ ನೀಡುವ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ಉತ್ತಮ ರಾಸುಗಳ ಆಯ್ಕೆಗಾಗಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಪಶು ಇಲಾಖೆ ವೈದ್ಯರು, ಅನುಭವಿ ರೈತರು, ವರ್ತಕರು ಸೇರಿದಂತೆ 14 ಮಂದಿ ಸದಸ್ಯರುಗಳಿದ್ದಾರೆ.

ಈ ಆಯ್ಕೆ ಸಮಿತಿ ಪ್ರತಿ ವರ್ಷವೂ ಉತ್ತಮ ರಾಸುಗಳ ಆಯ್ಕೆ ಮಾಡುತ್ತಿದೆ. ಅದರಂತೆ ಈ ಬಾರಿಯೂ 60 ರಿಂದ 65 ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಿತು.

ಪ್ರಶಸ್ತಿಗಾಗಿ ಬಿತ್ತನೆ ಹೋರಿ ಮತ್ತು ಜೋಡಿ ಎತ್ತುಗಳು ಎಂಬ ಎರಡು ವಿಭಾಗದಲ್ಲಿ ರಾಸುಗಳನ್ನು ಆಯ್ಕೆ ಮಾಡಲಾಗಿದ್ದು, ಬಿತ್ತನೆ ಹೋರಿ ವಿಭಾಗದಲ್ಲಿ ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ ಬಾಯಿ ಕೂಡಿದ ಹೋರಿ ಹಾಗೂ ಜೋಡಿ ಎತ್ತಿನ ವಿಭಾಗದಲ್ಲೂ ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ

ಬಾಯಿ ಕೂಡಿದ ಎತ್ತುಗಳು ಮತ್ತು ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ಈ ಎರಡು ವಿಭಾಗಗಳಲ್ಲೂ ಉತ್ತಮ ರಾಸುಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಸದಸ್ಯರಾದ ಕೋರಿ ಮಂಜುನಾಥ್ ತಿಳಿಸಿದರು.

ವಿವಿಧ ವಿಭಾಗಗಳ ಬಹುಮಾನಿತ ರಾಸುಗಳ ರೈತರ ವಿವರ

ಹಾಲು ಹಲ್ಲಿನ ಹೋರಿಗಳು:

ನೆಲಮಂಗಲ ಪರಮೇಶ್ (ದ್ವಿತೀಯ), ತಾಳವಾಡಿ ಶಿವಕುಮಾರ್ (ತೃತೀಯ).
ಎರಡು ಹಲ್ಲಿನ ಹೋರಿಗಳು:

ದೇವರದೊಡ್ಡಿ ಚಿಕ್ಕಣ್ಣ(ದ್ವಿತೀಯ), ನಾರಾಯಣಪ್ಪ ಮುತ್ಸಂದ್ರ ಹಾಗೂ ಮಂಜಯ್ಯ ಅರಕಲಗೂಡು(ತೃತೀಯ).

ಆರು ಎಲ್ಲಿನ ಎತ್ತುಗಳು:

ನಾಗೇಶ್, ಕೊರಟಗೆರೆ(ಪ್ರಥಮ), ಮಹಮ್ಮದ್ ಇಸ್ಮಾಯಿಲ್ ರಿಂಗ್ ರಸ್ತೆ(ದ್ವಿತೀಯ), ಪಾಪಣ್ಣ ಪ್ರಧಾನ ಅರ್ಚಕರು ಚಿಕ್ಕಣ್ಣದೇವರಹಟ್ಟಿ(ದ್ವಿತೀಯ), ವೈಶಾಕ್ ಹೊನ್ನೇನಹಳ್ಳಿ (ದ್ವಿತೀಯ), ವೆಂಕಟೇಶ್ ಕಣ್ಣೂರು(ದ್ವಿತೀಯ).

ಬಾಯಿಗೂಡಿದ ಹಲ್ಲಿನ ಎತ್ತುಗಳು:

ಸುಧಾಕರ್ ಹೊನ್ನೇನಹಳ್ಳಿ (ಪ್ರಥಮ), ಚಿಕ್ಕಣ್ಣ, ಚಿಕ್ಕಣ್ಣದೇವರಹಟ್ಟಿ(ಪ್ರಥಮ), ಹೋರಿ ಈರಣ್ಣ, ಅಮ್ಮನಘಟ್ಟ(ದ್ವಿತೀಯ), ಕೃಷ್ಣಪ್ಪ , ಮರಳೂರು(ದ್ವಿತೀಯ), ಪುಟ್ಟಣ್ಣ, ಕೊಡಿಗೆಹಳ್ಳಿ ಬೆಂಗಳೂರು ಉತ್ತರ (ತೃತೀಯ ಬಹುಮಾನ).

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link