ಶಿರಾ :
ನಗರದ ಜ್ಯೋತಿ ನಗರ ಬಡಾವಣೆಯ 2ನೇ ವಾರ್ಡಿನ ಸೀತಣ್ಣ ಕಾಂಪ್ಲೆಕ್ಸ್ ಬಳಿಯ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಅನೈರ್ಮಲ್ಯ ಉಂಟಾಗಿದ್ದು, ಈ ಕೂಡಲೆ ನಗರಸಭೆಯಿಂದ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಬಡಾವಣೆಯ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸದರಿ ಬಡಾವಣೆಯ ಮೇಲ್ಭಾಗದಿಂದ ಹಾದು ಬರುವ ಮನೆಗಳ ಹಾಗೂ ಹಾಲಿ ಇರುವ ಮನೆಗಳ ತ್ಯಾಜ್ಯದ ನೀರು ಮುಂದೆ ಸಾಗಲು ಚರಂಡಿಯೇ ಇಲ್ಲದ ಪರಿಣಾಮ, ರಸ್ತೆಗಳಲ್ಲಿ ಕಲುಷಿತ ನೀರು ತುಂಬಿಕೊಂಡಿದ್ದು ಇದರಿಂದ ರೋಗ-ರುಜಿನಗಳಿಗೂ ಕಾರಣವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಂತಾಗಿದ್ದು, ಈ ಕೂಡಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/01/sira-photo-number-512.1.2021-scaled-e1610518121161.jpg)