ಆಕಸ್ಮಿಕ ಬೆಂಕಿ ; ದಿನ ಬಳಕೆ ವಸ್ತುಗಳು ಬೆಂಕಿಗಾಹುತಿ

  ಶಿರಾ :

      ನಗರದ ಕೋಟೆ ಬಡಾವಣೆಯ ವಾರ್ಡ್ ನಂಬರ್ 13 ರ ಗರಿಮಾರನಹಟ್ಟಿಯಲ್ಲಿನ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಮನೆಯಲ್ಲಿದ್ದ ದಿನ ಬಳಕೆಯ ವಸ್ತುಗಳು, ಆಹಾರ ಧಾನ್ಯಗಳು ಸುಟ್ಟು ಸಾವಿರಾರು ರೂ. ನಷ್ಟ ಉಂಟಾಗಿದೆ.

     ಶನಿವಾರ ಮಧ್ಯಾಹ್ನ ಕೋಟೆ ಬಡಾವಣೆಯ ಗರಿಮಾರನಹಟ್ಟಿಯ ನಜೀರ್ ಎಂಬುವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದೆ. ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸಲು ಪ್ರಯತ್ನ ನಡೆಯಿಸಿತಾದರೂ, ಬೆಂಕಿಯಿಂದಾಗಿ ಮನೆಯಲ್ಲಿದ್ದ ದಿನ ಬಳಕೆಯ ಉಡುಪುಗಳು, ಆಹಾರ ಧಾನ್ಯಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ನಾಶಗೊಂಡಿವೆ.

      ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಸಹಾಯ ಧನ ನೀಡಿದರು. ತಹಶೀಲ್ದಾರ್ ಮಮತಾ, ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್, ನಗರಸಭೆಯ ಮಾಜಿ ಉಪಾಧ್ಯಕ್ಷ ಅಬ್ದುಲ್‍ಖಾದರ್, ಎಸ್.ಪಿ.ಮಹಮದ್ ರಫಿ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap