ಬರಗೂರು :
ಬರಗೂರಿನ ಹಾರೋಗೆರೆ ತಿರುವಿನಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರನಿಗೆÀ ಬೆನ್ನು ಮತ್ತು ಭುಜಕ್ಕೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿರಾ ತಾಲ್ಲೂಕು ಬರಗೂರಿನಲ್ಲಿ ಭಾನುವಾರ ಬೆಳಗ್ಗೆ 10.30 ರ ವೇಳೆ ನಡೆದಿದೆ.
ಮೃತನನ್ನು ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಹಾರೋಗೆರೆ ಗ್ರಾಮದ ನಿವಾಸಿ ಗೊಲ್ಲ ಜನಾಂಗದ ಮಂಜುನಾಥ್ [32] ಎಂದು ಹೇಳಲಾಗಿದೆ. ಈತನು ಬರಗೂರಿನ ಮದಲೂರು ಬಸ್ ನಿಲ್ದಾಣದಲ್ಲಿ ಬೈಕ್ನಲ್ಲಿ ರಸ್ತೆ ದಾಟುವಾಗ ಹಾರೋಗೆರೆ ಕಡೆಯಿಂದ ಬಂದ ಬನಶಂಕರಿ ಬಸ್ ಹಠಾತ್ತನೆ ಮದಲೂರು ಕಡೆಗೆ ತಿರುಗಿಸಿಕೊಂಡು ಬಂದು ಬೈಕ್ ಸವಾರನಿಗೆ ಹೊಡೆದಿದೆ. ಬೈಕ್ ಮತ್ತು ಸವಾರ ಬಸ್ ಮುಂದಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್ ಸವಾರನ ಎದೆ ಮತ್ತು ಬೆನ್ನಿಗೆ ಹೆಚ್ಚು ಪೆಟ್ಟಾಗಿತ್ತು. ಕೂಡಲೆ ಆ್ಯಂಬ್ಯುಲೆನ್ಸ್ನಲ್ಲಿ ಗಾಯಾಳುವನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮಂಜುನಾಥ್ ಸಾವನ್ನಪ್ಪಿದ್ದಾರೆ. ಬಸ್ ಮಾಲಿಕ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮೃತನ ಸಂಬಂಧಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಪಟ್ಟನಾಯಕನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
