ಶಿರಾ :
ಕೋವಿಡ್ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ ಅವರ ಸೂಚನೆಯಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೂರು ಆಮ್ಲಜನಕ ಸಾಂದ್ರಕಗಳನ್ನು ಗುರುವಾರ ಶಿರಾ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಸ್ತಾಂತರಿಸಿದರು.
ಒಟ್ಟು 10 ಆಮ್ಲಜನಕ ಸಾಂದ್ರಕಗಳನ್ನು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಜಿಲ್ಲಾ ಆರಕ್ಷಕ ಇಲಾಖೆಯಿಂದ ವಿತರಿಸಲಾಗಿದ್ದು, ಈ ಪೈಕಿ 5 ಸಾಂದ್ರಕಗಳನ್ನು ತುಮಕೂರು ನಗರಕ್ಕೆ, 2 ಸಾಂದ್ರಕಗಳನ್ನು ತಿಪಟೂರು ನಗರಕ್ಕೆ, 3 ಸಾಂದ್ರಕಗಳನ್ನು ಶಿರಾ ನಗರಕ್ಕೆ ತುಮಕೂರು ಜಿಲ್ಲಾ ಪೆÇಲೀಸ್ ಇಲಾಖೆಯ ವತಿಯಿಂದ ವಿತರಿಸಲಾಗಿದೆ. ಡಾ. ಸಿ.ಎಂ.ರಾಜೇಶ್ಗೌಡ ಹಾಗೂ ಸ್ಥಳೀಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್ ಆಮ್ಲಜನಕದ ಸಾಂದ್ರಕಗಳನ್ನು ಸ್ವೀಕರಿಸಿದರು.
ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಮಾತನಾಡಿ, ಮೊದಲಿಗೆ ಶಿರಾ ಆಸ್ಪತ್ರೆಯಲ್ಲಿ ಐದು ಆಕ್ಸಿಜನ್ ಕಾನ್ಸ್ಸಂಟ್ರೇಟರ್ಗಳನ್ನು ನೀಡಲಾಗಿತ್ತು. ಇದರೊಟ್ಟಿಗೆ ಅಮೇಜಾನ್ ಕಂಪನಿ ಕೂಡ ಐದು ಕಾನ್ಸಂಟ್ರೇಟರ್ಗಳನ್ನು ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದು, ಇದರ ಜೊತೆಗೆ ಇದೀಗ ಜಿಲ್ಲಾ ಆರಕ್ಷಕ ಇಲಾಖೆ ಕೂಡ ಮೂರು ಸಾಂದ್ರಕಗಳನ್ನು ನೀಡಿರುವುದು ಶ್ಲಾಘನಾರ್ಹ ಸಂಗತಿ ಎಂದರು.
ಶಿರಾ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಅನುಕೂಲಕ್ಕಾಗಿ ಸಾಕಷ್ಟು ಆಕ್ಸಿಜನ್ ಶೇಖರಣೆ ಇದ್ದು, ಕೋವಿಡ್ ರೋಗಿಗಳ ಆರೋಗ್ಯವನ್ನು ಕಾಪಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತುಮಕೂರು ಉಪ ವಿಭಾಗದ ಡಿವೈಎಸ್ಪಿ ಕುಮಾರಪ್ಪ, ಶಿರಾ ಗ್ರಾಮಾಂತರ ಸಿ.ಪಿ.ಐ. ರವಿಕುಮಾರ್, ನಗರ ಠಾಣಾ ಸಿ.ಪಿ.ಐ. ಹನುಮಂತಪ್ಪ, ದಂಡಾಧಿಕಾರಿ ಮಮತಾ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಾಥ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ