ಶಿರಾ :
ಕೋವಿಡ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಳ್ಳಂಬೆಳ್ಳ ಭಾಗದ ಅನೇಕ ರೈತರು ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲಾಗದೆ ಕೈಚೆಲ್ಲಿ ಕೂತಾಗ ತಮ್ಮ ಹುಟ್ಟೂರಿನ ಗ್ರಾಮದ ಚಿನ್ನೇನಹಳ್ಳಿ ಗ್ರಾಮದ ರೈತರ ಹಣ್ಣುಗಳನ್ನು ಖರೀದಿ ಮಾಡಿದ ಜಿಪಂ ಮಾಜಿ ಸದಸ್ಯ ಸಿ.ಆರ್.ಉಮೇಶ್ ಹಣ್ಣು ಖರೀದಿ ಮಾಡಿ ಹಣ್ಣಿನ ರಸಾಯನ ತಯಾರಿಸಿ ಕೋವಿಡ್ ರೋಗಿಗಳಿಗೆ ವಿತರಣೆ ಮಾಡಿದರು.
ಕೋವಿಡ್ನಿಂದ ಹಣ್ಣುಗಳ ವ್ಯಾಪಾರ ವಹಿವಾಟು ಕೂಡ ತಗ್ಗಿದ್ದು ಹಣ್ಣುಗಳನ್ನು ಕೊಳ್ಳುವವರು ಕೂಡ ಕಡಿಮೆಯಾಗಿದ್ದಾರೆ. ತಮ್ಮ ಹುಟ್ಟೂರು ಚಿನ್ನೇನಹಳ್ಳಿ ಗ್ರಾಮದ ರೈತರು ಬೆಳೆದ ಹಣ್ಣುಗಳನ್ನು ಖರೀದಿಸಿದ ಉಮೇಶ್, ಹಣ್ಣಿನಿಂದ ರಸಾಯನ ತಯಾರಿಸಿ, ಶಿರಾ ಸರ್ಕಾರಿ ಆಸ್ಪತ್ರೆಯ ಕೋವಿಡ್ ರೋಗಿಗಳು, ಇತರೆ ರೋಗಿಗಳಿಗೆ ರಸಾಯನ ತಯಾರಿಸಿ ಉಚಿತವಾಗಿ ನೀಡಿದರು.
ಆಡಳಿತ ವೈದ್ಯ ಡಾ.ಶ್ರೀನಾಥ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯ ಡಾ.ಡಿ.ಎಂ.ಗೌಡ, ಮೂಡಲಗಿರಿಗೌಡ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ