ಶಿರಾ :
ಶಿರಾ ನಗರದಿಂದ ಬೈಪಾಸ್ ರಸ್ತೆಗೆ ಬುಕ್ಕಾಪಟ್ಟಣ ರಸ್ತೆ ಮಾರ್ಗವಾಗಿ ಚಲಿಸುವ ಎಸ್.ಕೆ.ಜಿ. ಮಿಲ್ ಮುಂಭಾಗದ ಅಧ್ವಾನಗೊಂಡ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಶಿರಾ ನಗರದಿಂದ ಬುಕ್ಕಾಪಟ್ಟಣ ರಸ್ತೆಗುಂಟ ಬೈಪಾಸ್ಗೆ ಚಲಿಸುವ ರಸ್ತೆ ಇದಾಗಿದ್ದು, ಎಸ್.ಕೆ.ಜಿ. ಮಿಲ್ ಮುಂಭಾಗದವರೆಗಿನ ಸುಮಾರು 1 ಕಿ.ಮೀ. ರಸ್ತೆ ಡಾಂಬರ್ ಕಾಣದೆ ವರ್ಷಗಳೇ ಉರುಳಿದ್ದರೂ ಹೆದ್ದಾರಿ ಪ್ರಾಧಿಕಾರ ಈ ರಸ್ತೆಯ ದುರಸ್ತಿಗೆ ಮುಂದಾಗಿಲ್ಲ.
ಸದರಿ ರಸ್ತೆಯು ಬೈಪಾಸ್ ರಸ್ತೆಗೆ ಸೇರುವ ರಸ್ತೆಯಷ್ಟೇ ಅಲ್ಲದೆ ತಿರುವಳ್ಳೂರು ಹಾಗೂ ಮಂಗಳೂರು ಹೆದ್ದಾರಿ ರಸ್ತೆಯೂ , ವಾಹನಗಳ ಓಡಾಟ ನಿರಂತರವಾಗಿರುತ್ತದೆ. ದೂಳೆಬ್ಬಿಸಿಕೊಂಡು ಹೋಗುವ ವಾಹನಗಳಿಂದ ಸಾರ್ವಜನಿಕರ ಅನಾರೋಗ್ಯಕ್ಕೂ ಕಾರಣವಾಗಿದೆ. ಸದರಿ ರಸ್ತೆ ದುರಸ್ತಿಗೆ ಮಾಡಿದ ಮನವಿಗಳೆಲ್ಲವೂ ಕಸದ ಬುಟ್ಟಿ ಸೇರಿದ್ದು ಈ ಕೂಡಲೇ ರಸ್ತೆ ದುರಸ್ತಿ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
