ದಾವಣಗೆರೆ:
ನಗರದ ಸ್ಮಾರ್ಟ್ ಸಿ.ಟಿ ಕಾಮಗಾರಿಯಲ್ಲಿ ಮತ್ತೊಂದು ಅವಾಂತರ ನಡೆದಿದೆ, ನಗರದ ರಿಂಗ್ ರಸ್ತೆಯ ಭೂತಪ್ಪನ ದೇವಸ್ಥಾನದ ಹತ್ತಿರ ಕಾಮಗಾರಿಯಲ್ಲಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಹಾಗು ಸ್ಮಾರ್ಟ್ ಸಿ.ಟಿ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದಾಗಿ ದಾವಣಗೆರೆ ಕೆ.ಅರ್ ರಸ್ತೆಯ, ಮೈಸೂರು ಬ್ಯಾಂಕ್ ಹಿಂಭಾಗದ ನಿವಾಸಿ, ಮನೋಜ್(23) ಎಂಬ ಅಮಾಯಕ ಕೂಲಿ ಕಾರ್ಮಿಕ ಯುವಕ ವಿದ್ಯುತ್ ಸ್ಪರ್ಶದಿಂದ ಮೃತ ಪಟ್ಟಿದ್ದಾನೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಕರ್ಬ್ ಹಾಗು ಪೇವರ್ಸ್ ಹಾಕಲು ಗುಂಡಿ ಅಗಿಯಲಾಗಿತ್ತು, ಈ ಸಂದರ್ಭದಲ್ಲಿ ಯು.ಜಿ ಕೇಬಲ್ ಗೆ ಡ್ಯಾಮೇಜ್ ಆಗಿದೆ, ಇದನ್ನೂ ಗಮನಿಸದ ಗುತ್ತಿಗೆದಾರ ಹಾಗು ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಅದನ್ನು ಹಾಗೆ ಬಿಟ್ಟಿದ್ದಾರೆ, ಸುರಕ್ಷತೆ ಕ್ರಮಕ್ಕೆ ಯಾವುದೇ ಜಾಗೃತಿಗಾಗಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲಾ, ರಸ್ತೆಯ ಬದಿಯಲ್ಲಿ ಜೆಸಿಬಿಯಿಂದ ಅಥವಾ ಹಸ್ತಚಾಲಿತವಾಗಿ ಅಗೆಯಲು ಕೆ.ಇ.ಬಿ ಯಿಂದ ಅನುಮತಿ ಪಡೆದಿರಬೇಕು, ಇಂತಹ ಸ್ಥಳದಲ್ಲಿ ಕೆ.ಇ.ಬಿ ಅಧಿಕಾರಿಯ ಉಪಸ್ಥಿತಿಯಲ್ಲಿ ಗುಂಡಿಗಳನ್ನ ಅಗೆಯಬೇಕು, ಕಾಮಗಾರಿ ನಂತರ ಯಥಾಸ್ಥಿತವಾಗಿ ಸುರಕ್ಷತೆಯನ್ನು ಪರಿಶೀಲಿಸಿ ಮುಚ್ಚಬೇಕು.
ಆದರೆ, ಇದ್ಯಾವುದನ್ನೂ ಮಾಡದೆ ಒಬ್ಬ ಅಮಾಯಕನನ್ನು ಬಲಿ ಪಡೆದಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಸಂಬಂಧ ಪಟ್ಟ ಸ್ಮಾರ್ಟ್ ಸಿ.ಟಿ ಅಧಿಕಾರಿಗಳ, ಕೆ.ಇ.ಬಿ ಅಧಿಕಾರಿಗಳ ಹಾಗೂ ಗುತ್ತಿಗೆದಾರನ ವಿರುಧ್ಧ ಪ್ರಕರಣ ದಾಖಲಿಸಬೇಕೆಂದು ವೈಬಿಜಿಬಿ
ಅಧ್ಯಕ್ಷ ನಾಗರಾಜ್ ಸೂರ್ವೆ sಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ ಹಾಗು ಮೃತನ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
