ಗುಬ್ಬಿ :
ಮಕ್ಕಳನ್ನ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಸಿದರೆ ಅವರಿಗೆ ಬೇರೆ ಬೇರೆ ಹವ್ಯಾಸಗಳು ಬರುವುದಿಲ್ಲ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಬೆಳೆಯಲು ಅನೂ ಕುಲವಾಗುತ್ತದೆ ಎಂದು ಗೃಹಸಚಿವಹಾಗೂ ತುಮಕುರುಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.
ಗುಬ್ಬಿ ಪಟ್ಟಣದ ವಿವೇಕಾನಂದ ರಸ್ತೆಯಲ್ಲಿ ಸ್ಥಾಪಿತವಾಗಿರುವ ವಿವೇಕಾನಂದ ಸ್ಪೋರ್ಟ್ಸ್ ಸ್ಕೊಯರ್ ನ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ತುಮಕೂರು ನಗರದಲ್ಲಿ ನಾವು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸಾವಿರಾರು ರೂ ಖರ್ಚು ಮಾಡಿದ್ದೇವೆ ಆದರೆ ಯಾರಿಗೂ ಇತರಹದ ಒಂದು ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುವ ಆಲೋಚನೆ ಇದುವರೆವಿಗೂ ಬಂದಿಲ್ಲ ಎಲ್ಲಾ ಕ್ರೀಡೆಗಳನ್ನು ಒಂದು ಕಡೆ ನೆಡೆಯುವಂತೆ ಮಾಡುವುದರಿಂದ ಕ್ರೀಡಾಪಟುಗಳಿಗೆ ಅನುಕೂಲವಾಗುತ್ತದೆ ಎಂದರು. ನಾವು ಸುಮಾರು 58 ಕೋಟಿ ಖರ್ಚು ಮಾಡಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಮಾಡಿದ್ದೇವೆ ಆದರೆ ಅಲ್ಲಿಯೂ ಎಲ್ಲಾ ಕ್ರೀಡೆಗಳು ಒಂದು ಕಡೆ ಇರುವಂತೆ ಮಾಡಲು ಸಾಧ್ಯವಾಗಿಲ್ಲವೆಂದರು
ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಈ ತರಹದ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ಪ್ರಯತ್ನಬಿಮಾಡಲಾಗುವುದು ಎಂದ ಗೃಹ ಸಚಿವರು ಗುಬ್ಬಿ ಎಂದರೆ ಮೊದಲಿಂದಲೂ ಕ್ರೀಡೆಗೆ ಹೆಸರುವಾಸಿ ಇಲ್ಲಿನ ಖೋ ಖೋ ಆಟಗಾರರರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಟವಾಡಿ ಹೆಸರುಗಳಿಸಿದ್ದಾರೆ ಇದಕ್ಕೆ ಇಲ್ಲಿನ ಕುಮಾರಣ್ಣ ಎಂಬುವರು ಕಾರಣ ಕರ್ತರು ಎಂದರು. ನಾನು ಸ್ವತಃ ಅಥ್ಲೆಟಿಕ್ ಆಟಗಾರ ನಾನು ಕಳೆದ 35 ವರ್ಷಗಳ ಹಿಂದೆ ಮಾಡಿರುವ ಸಾಧನೆಯನ್ನು ಇಲ್ಲಿಯವರೆಗೂ ಯಾರು ಮುರಿದಿಲ್ಲವೆಂದರು. ನಮ್ಮ ದೇಶ ಅತಿ ಹೆಚ್ಚು ಯುವಕ ರನ್ನು ಹೊಂದಿರುವ ದೇಶ ಮತ್ತು ಇಡಿ ಪ್ರಪಂಚಕ್ಕೆ ಐ ಟಿ ಕ್ಷೇತ್ರಕ್ಕೆ ಯುವಕರನ್ನು ನೀಡಿದ ಹೆಮ್ಮೆ ನಮ್ಮ ದೇಶಕ್ಕಿದೆ ಎಂದರು
ಇಂದು ವಿವೇಕಾನಂದರ ದಿನಾಚರಣೆ ಈ ಸಂದರ್ಭದಲ್ಲಿ ಹೇಳುವುದಾದರೆ ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಲ್ಲಿ ದೇಶಕ್ಕೆ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಯತ್ತ ಸಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ನಮ್ಮ ಆರೋಗ್ಯ ಮತ್ತು ಮನಸ್ಸು ಸ್ಥಿಮಿತವಾಗಿರಲು ಕ್ರೀಡೆಯಿಂದ ಮಾತ್ರ ಸಾಧ್ಯ ಎಂದರು ಗುಬ್ಬಿ ಪಟ್ಟಣದಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹ ನೀಡುವಲ್ಲಿ ವಿವೇಕಾನಂದ ಸ್ಪೋರ್ಟ್ಸ್ ಸ್ಕೊಯರ್ ಹೆಚ್ಚು ಹೆಚ್ಚು ಕಾರ್ಯೋನ್ಮಕವಾಗಲಿ ಎಂದು ಅಭಿಪ್ರಾಯಪಟ್ಟರು ಕಾರ್ಯಕ್ರಮದಲ್ಲಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್,ತಹಶೀಲ್ದಾರ್ ಬಿ ಆರತಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೇ ಮಮತಾ ಶಿವಪ್ಪ,ಬಿ ಜೆ ಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಟಿ ಕೆ ನಂಜುಂಡಪ್ಪ, ಮತ್ತು ಪಟ್ಟಣ ಪಂಚಾಯ್ತಿ ಯ ಸದಸ್ಯರುಗಳು ತುಮಕೂರಿನ ಚಾರ್ಟೆಡ್ ಅಕೌಂಟೆಂಟ್ ವಿಶ್ವನಾಥ್,ಗುತ್ತಿಗೆದಾರ ಇಲಿಯಾಸ್, ಸಂಸ್ಥೆಯ ಅರುಣ್ ಕುಮಾರ್ ಸಂಗೀತಾ, ಅಭಿಷೇಕ್, ಆಚಲಾ,ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಹೊಸಪೇಟೆಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನೆಡೆಯಿತು.
