ಹಾಸನ :
ಬಸ್ ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ತನ್ನ ಸೋದರ ಮಾವನ ಮಗಳನ್ನು ಯುವಕ ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ಚಲಿಸುತ್ತಿರುವ ಕಾರಿನಲ್ಲೇ ತಾಳಿ ಕಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ.
ಆರೋಪಿ ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ನಿವಾಸಿ ಮನು. ಯುವತಿಯ ಅತ್ತೆಯ ಮಗನಾದ ಮನು ಎಂಬಾತ ತನ್ನ ಸ್ನೇಹಿತರ ಸಹಾಯದಿಂದ ಹುಡುಗಿಯನ್ನ ಕಾರಿಗೆ ಹತ್ತಿಸಿಕೊಂಡು, ಬಲವಂತವಾಗಿ ಆಕೆಗೆ ತಾಳಿ ಕಟ್ಟಿ ವಿಡಿಯೋ ಮಾಡಿದ್ದಾನೆ.
ಮನು ಕಳೆದ ಹಲವು ದಿನಗಳಿಂದ ತನ್ನ ಅತ್ತೆ ಮಗಳಿಗೆ ತನ್ನನ್ನು ಪ್ರೀತಿಸುವಂತೆ ಮನವಿ ಮಾಡಿದ್ದಾನೆ. ಅಲ್ಲದೆ, ಮದುವೆಯಾಗುವಂತೆ ಪದೇ ಪದೇ ಪೀಡಿಸಿದ್ದಾನೆ. ಆದರೆ, ಇದಕ್ಕೆ ಆಕೆ ಒಪ್ಪದ ಕಾರಣ ಹೀಗೆ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನೆ. ಈ ವೇಳೆ ಯುವತಿ ಮನುವಿನ ಕೈ ಕಚ್ಚಿದ್ದಾಳೆ. ಅಲ್ಲದೆ ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದಳು. ಕೈ ಕಚ್ಚಿದರೂ, ಕುತ್ತಿಗೆಗೆ ಕೈ ಅಡ್ಡ ಇಟ್ಟಿದ್ದರು ಸಹ ಮನು, ಯುವತಿಯನ್ನು ಬಿಡದೆ ತಾಳಿ ಕಟ್ಟಿ ಮದುವೆ ಆಗಿದ್ದಾನೆ. ಅಲ್ಲದೆ, ಆತ ಯುವತಿಗೆ ತಾಳಿ ಕಟ್ಟಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಮನು ವಿರುದ್ದ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಯುವಕನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/ef76202123afd7ace11df522862.gif)