ಹಾಸನ :
ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ 1.20 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.
ನಿನ್ನೆ ತಡರಾತ್ರಿ 12.45ರ ಸಮಯದಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ಚನ್ನಾಂಬಿಕ ಕಲ್ಯಾಣ ಮಂಟಪದ ಬಳಿ ಸಚಿವ ಹೆಚ್.ಡಿ ರೇವಣ್ಣನವರ KA01MH 4477 ಸಂಖ್ಯೆಯ ಬೆಂಗಾವಲು ವಾಹನವನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಪತ್ತೆಯಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಬೆಂಗಾವಲುಪಡೆ ವಾಹನದಲ್ಲಿದ್ದ ವಾಹನದಲ್ಲಿದ್ದ ಚಂದ್ರಯ್ಯ ಹಾಗೂ ಇನ್ನೊಬ್ಬರ ವಿರುದ್ದ ಪ್ರಕರಣದ ದಾಖಲಾಗಿದ್ದು, ಅಧಿಕಾರಿಗಳು, ಹಣ ವಶಪಡಿಸಿಕೊಂಡಿದ್ದು ಎಫ್ ಐ ಆರ್ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
