ಹಾಸನ:
ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಾಸನ ನಗರದ ಹೊರವಲಯದ ಗಾಡೇನಹಳ್ಳಿಯಲ್ಲಿರುವ ಕಾಂಪನ್ಸೇಟೀವ್ ಪ್ರೌಢಶಾಲೆಯಲ್ಲಿ ನಡೆದಿದೆ.
ಲಕ್ಷ್ಮೀ (16) ಮೃತ ವಿದ್ಯಾರ್ಥಿ. ಮೂಲತಃ ಬೆಂಗಳೂರಿನವರಾದ ಲಕ್ಷ್ಮೀ ಪಾಲಕರು ಕಳೆದ ವಾರವಷ್ಟೇ ಲಕ್ಷ್ಮಿಯನ್ನು 10ನೇ ತರಗತಿಗೆ ಶಾಲೆಗೆ ದಾಖಲಿಸಿದ್ದರು. ಲಕ್ಷ್ಮೀ ಶಾಲೆಯ ಹಾಸ್ಟಲ್ನಲ್ಲಿ ತಂಗಿದ್ದರು.
ಗುರುವಾರ ಬೆಳಗ್ಗೆ ಲಕ್ಷ್ಮೀ ಮೃತದೇಹ ಶಾಲೆಯ ಕೊಠಡಿಯಲ್ಲಿ ಪತ್ತೆಯಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/07/Hassan-Suicide.gif)