ಬೆಂಗಳೂರು :
ರಾಜ್ಯದಲ್ಲಿ ಇಂದು ಬರೋಬ್ಬರಿ 127 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲುವ ಮೂಲಕ ರಾಜ್ಯದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮಂಡ್ಯದಲ್ಲೇ 51 ಕೇಸ್ಗಳು, ದಾವಣಗೆರೆಯಲ್ಲಿ 19, ಶಿವಮೊಗ್ಗದಲ್ಲಿ 12 ಹಾಗೂ ಕಲಬುರಗಿಯಲ್ಲಿ 11 ಪ್ರಕರಣ, ಉಳಿದಂತೆ ಬೆಂಗಳೂರು-5, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ತಲಾ 4 ಮಂದಿಗೆ ಪಾಸಿಟಿವ್, ಹಾಸನ-3, ಚಿಕ್ಕಮಗಳೂರು- 2, ವಿಜಯಪುರ, ಯಾದಗಿರಿ, ಗದಗ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದು ಕೇಸ್ ಗಳು ಪತ್ತೆಯಾಗಿವೆ.
127 more #COVID19 cases reported in Karnataka from 5 pm yesterday till 12 pm today. Total number of cases in the state is now at 1373, including 802 active cases, 530 discharged & 41 deaths (1 due to 'non-covid' cause): State Health Department pic.twitter.com/KK6VkJJitr
— ANI (@ANI) May 19, 2020
ಈ ಮೂಲಕ ಕರ್ನಾಟಕದಲ್ಲಿ ಇಂದು 127 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 1373ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/Covid-corona.gif)