ಬೆಂಗಳೂರು :
ಒಡಿಸ್ಸಾದಿಂದ ಗಾಂಜಾ ತಂದು ಸಿಲಿಕಾನ್ ಸಿಟಿಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಾರತ್ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಒರಿಸ್ಸಾದ ರಾಯಗಡ ಜಿಲ್ಲೆಯ ಬಿಸ್ಸಂಕಟ್ಟಕ್ ಠಾಣಾ ವ್ಯಾಪ್ತಿಯ ಕೊಡಗುಲಾಮಿ ಗ್ರಾಮದ ನಿವಾಸಿ ಕಿರದ್ ಮಿಶಾಲ್ (35) ಬಂಧಿತ ಆರೋಪಿ. ಈತ ಒರಿಸ್ಸಾ ರಾಜ್ಯದಿಂದ ರೈಲು ಮೂಲಕ ಬೆಂಗಳೂರಿಗೆ ಅಪಾರ ಪ್ರಮಾಣದಲ್ಲಿ ಗಾಂಜಾವನ್ನು ಲಗ್ಗೇಜ್ ಟ್ರಾವೆಲ್ ಬ್ಯಾಗ್ನಲ್ಲಿ ತಂದು ಮಾರಾಟ ಮಾಡುತ್ತಿದ್ದ.
ಲೋಕಲ್ ಪೆಡ್ಲರ್ಗಳು ಗಾಂಜಾ ವ್ಯಸನಿಗಳಿಗೆ ಮಾರಾಟ ಮಾಡೊ ಕೆಲಸ ಮಾಡುತ್ತಿದ್ದರು. ಕೆಲ ಲೋಕಲ್ ಪೆಡ್ಲರ್ ಗಳನ್ನು ಬಂಧನ ಮಾಡಿದ್ರು ಸಹ ಮೈನ್ ಡೀಲರ್ ಅರೆಸ್ಟ್ ಆಗಿರಲಿಲ್ಲ. ಕಿರದ್ ಮಿಶಾಲ್ ಬಂಧನದಿಂದ ಸದ್ಯ ಐದು ಲಕ್ಷ ಮೌಲ್ಯದ 15 ಕೆಜಿ ಗಾಂಜಾ ಪತ್ತೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/ganja-arrest.gif)