ಚಿಕ್ಕನಾಯಕನಹಳ್ಳಿ :
ಭೀಕರ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿರುವ ದುರ್ಘಟನೆ ತಾಲ್ಲೂಕಿನ ಜೆ.ಷಿ.ಪುರದ ಬಳಿ ತಿರುವಿನಲ್ಲಿ ನಡೆದಿದೆ.
ಮೈಸೂರಿನಲ್ಲಿ ನಡೆದ ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ಹುಳಿಯಾರಿನ ಬಸ್ ಏಜಂಟ್ ಕೋಳಿ ರಾಜಣ್ಣನವರ ಮಗ ಹಾಗೂ ಮೂವರಿದ್ದ ಕಾರು ಜೆ.ಸಿ.ಪುರದ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ರಾಜಣ್ಣನ ಕಡೆಯ ಮಗ ದರ್ಶನ್ ಹಾಗೂ ತಂಗಿಯ ಮಗ ಸಾವನ್ನಪ್ಪಿದ್ದರೆ, ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಾಯಗಳಾಗಿದ್ದು ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ನಿಮಾನ್ಸ್ ಗೆ ಕಳುಹಿಸಿಕೊಡಲಾಗಿದೆ.
ಮೃತರ ಶವವನ್ನು ಇಂದು ಮಧ್ಯಾನ 12 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಹುಳಿಯಾರಿನ ವಾಸವಿ ಶಾಲೆ ಬಳಿಯಿರುವ ಮನೆಗೆ ಕರೆತಂದು 2 ಗಂಟೆ ನಂತರ ಅರಸೀಕೆರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/Untitled-3-2.gif)