ಚಿಕ್ಕಮಗಳೂರು :
ಕಾರ್ ನಲ್ಲಿ ಜಾಲಿ ರೈಡ್ ಮಾಡುವಾಗ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಳಿಹಳ್ಳದ ಬಳಿ ನಡೆದಿದೆ.
ಧ್ಯಾನ್ ಗೌಡ (17), ಆದರ್ಶ ಉತ್ತಪ್ಪ (17) ಮೃತಪಟ್ಟ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ವಿದ್ಯಾರ್ಥಿಗಳು ಎಂಇಎಸ್ ಕಾಲೇಜಿನವರಾಗಿದ್ದು, ಎರಡು ಮಾರುತಿ 800 ಕಾರಿನಲ್ಲಿ ಜಿದ್ದಾಜಿದ್ದಿಯಿಂದ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡಿದ್ದಾರೆ. ಈ ಸಂದರ್ಭ ಅವಘಡ ಸಂಭವಿಸಿದೆ.
ಇದೇ ವೇಳೆ ಮುದ್ರೆಮನೆಯ ಹರ್ಷಿತ್ ಕರಿಯಪ್ಪನಿಗೆ ಗಂಭೀರ ಗಾಯವಾಗಿದ್ದು, ಸ್ಥಿತಿ ಗಂಭೀರವಾಗಿದೆ.
20 ದಿನಗಳ ಹಿಂದಷ್ಟೇ ಆದರ್ಶ ಉತ್ತಪ್ಪನ ತಂದೆ ಮೃತಪಟ್ಟಿದ್ದು, ನಿನ್ನೆಯಷ್ಟೆ ತಂದೆಯ ಕಾರ್ಯ ಮುಗಿಸಿ ಕಾಲೇಜಿಗೆ ಹಾಜರಾಗಿದ್ದ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/1b8a38f8a82fdf434fd6ae3e4e4.gif)