ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ 3 ಮಕ್ಕಳು ನೀರುಪಾಲು!!

ಕಾಸರಗೋಡು:

       ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಞಿಂಗಾಡ್ ನಲ್ಲಿ ಗುರುವಾರ ಸಂಜೆ ನಡೆದಿದೆ.

      ನೂರುದ್ದೀನ್ ಎಂಬವರ ಪುತ್ರ ಬಶೀರ್ (4), ನಾಸಿರ್ ಎಂಬವರ ಪುತ್ರ ಅಜ್ನಾಸ್ (5), ಸಮೀರ್ ಎಂಬವರ ಪುತ್ರ ನಿಶಾದ್ (6) ಮೃತ ಮಕ್ಕಳು ಎಂದು ಗುರುತಿಸಲಾಗಿದೆ.

      ಮನೆಯಿಂದ 200 ಮೀಟರ್ ದೂರದಲ್ಲಿರುವ ಕೆರೆಯಲ್ಲಿ ಸಂಜೆ ವೇಳೆ ಆಟವಾಡಲು ಇಳಿದಿದ್ದ ಮಕ್ಕಳು ಅದರಲ್ಲಿದ್ದ ಕೆಸರಲ್ಲಿ ಹೂತುಹೋಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೋಷಕರು ಮಕ್ಕಳ ಹುಡುಕಾಟ ನಡೆಸಿ ಪರಿಸರವಾಸಿಗಳು ಹಾಗೂ ಮನೆಯವರು ಮಕ್ಕಳನ್ನು ಮೇಲಕ್ಕೆತ್ತಿ ತಕ್ಷಣ ಕನ್ನಂಗಾಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಕ್ಕಳು ಅದಾಗಲೇ ಮೃತಪಟ್ಟರೆಂದು ವೈದ್ಯರು ದೃಢಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap