31 ಐಪಿಎಸ್ ಅಧಿಕಾರಿಗಳ ವರ್ಗಾವಣೆ!!

ಬೆಂಗಳೂರು :
      ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಈ ನಡುವೆ ಸರ್ಕಾರ ಹಲವು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
      ಒಟ್ಟು 31 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.

      ಗುಪ್ತಚರ ಇಲಾಖೆ‌ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ. ದಯಾನಂದ್ ಅವರನ್ನು ಎಡಿಜಿಪಿ ಅಮರ್ ಕುಮಾರ್ ಪಾಂಡೆ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿಯಾಗಿ ಶರತ್ ಚಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಕಮೀಷನರ್ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್, ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರನ್ನು ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗಿದೆ.

      ದಕ್ಷಿಣ ವಲಯ ಐಜಿಪಿಯಾಗಿ ವಿಪುಲ್ ಕುಮಾರ್, ಬಳ್ಳಾರಿ ವಲಯ ಐಜಿಪಿಯಾಗಿ ನಂಜುಂಡಸ್ವಾಮಿ, ದಾವಣಗೆರೆ ವಲಯ ಐಜಿಪಿಯಾಗಿ ಅಮೃತ್ ಪೌಲ್, ಕೇಂದ್ರ ಕಾರಾಗೃಹ ಇಲಾಖೆ ಐಜಿಪಿಯಾಗಿ ಎಚ್.ಎಸ್. ರೇವಣ್ಣ, ಮಂಗಳೂರು ಕಮೀಷನರ್ ಆಗಿ ಡಿಐಜಿ ಸಂದೀಪ್ ಪಾಟೀಲ್, ಬೆಂಗಳೂರು ಸಿಎಆರ್ ಜಂಟಿ ಆಯುಕ್ತರಾಗಿ‌ ಟಿ.ಆರ್. ಸುರೇಶ್, ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

      ಚೇತನ್ ಸಿಂಗ್ ಸ್ಥಳಕ್ಕೆ ಕಲಬುರಗಿ ಎಸ್​ಪಿ ಎನ್. ಶಶಿಕುಮಾರ್, ಕಲಬುರಗಿ ಎಸ್​ಪಿಯಾಗಿ‌ ಎ.ಡಾ. ಮಾರ್ಟಿನ್ ವರ್ಗಾವಣೆ ಗೊಂಡಿದ್ದಾರೆ. ಬೆಂಗಳೂರು ಆಗ್ನೇಯ ಡಿಸಿಪಿ ಬೋರಲಿಂಗಯ್ಯ, ಚಾಮರಾಜನಗರ ಎಸ್ ಪಿಯಾಗಿ‌ ಎಚ್ ಡಿ ಆನಂದ್ ಕುಮಾರ್​, ಬೆಳಗಾವಿ ಕಮೀಷನರ್ ಆಗಿ ಬಿ.ಎಸ್. ಲೋಕೇಶ್ ಕುಮಾರ್, ಶಿವಮೊಗ್ಗ ಎಸ್​ಪಿಯಾಗಿ ಎಂ.ಅಶ್ವಿನಿ ವರ್ಗಾವಣೆಗೊಂಡಿದ್ದಾರೆ.

      ಇನ್ನು, ಚಿಕ್ಕಬಳ್ಳಾಪುರ ಎಸ್​ಪಿಯಾಗಿ ಕೆ. ಸಂತೋಷ್ ಬಾಬು, ಎಎನ್ಎಫ್ ಎಸ್ ಪಿಯಾಗಿ ವಿಕಾಸ್ ಕುಮಾರ್, ಕೆಎಸ್ಆರ್​ಟಿಸಿ ಭದ್ರತೆ ಮತ್ತು ಇಂಟೆಲಿಜೆನ್ಸ್ ಡೈರೆಕ್ಟರ್ ಆಗಿ‌ ಪಿ. ಹರ್ಷ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link