ಬೆಂಗಳೂರು :
ರಾಜ್ಯ ಸರ್ಕಾರವು ಶುಕ್ರವಾರವಷ್ಟೇ 34 ಐಎಎಸ್ ಅಧಿಕಾರಿಗಳು, 29 ಕೆಎಎಸ್ ಅಧಿಕಾರಿಗನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಶನಿವಾರ ಮತ್ತೆ 6 ಐಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದೆ.
ವರ್ಗಾವಣೆಗೊಂಡಿರುವ 6 ಐಎಎಸ್ ಅಧಿಕಾರಿಗಳು
- ಮೊಹಮ್ಮದ್ ಇಕ್ರಮುಲ್ಲಾ ಷರೀಫ್ – ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯತಿ.
- ಡಾ.ಕೆ.ಆನಂದ್ – ಸಿಇಒ, ಗದಗ ಜಿ.ಪಂ.
- ಪೂವಿತಾ – ಸಿಇಒ, ಮೈಸೂರು ಜಿ.ಪಂ.
- ಪಡ್ವೆ ರಾಹುಲ್ ತುಕಾರಾಂ – ಸಿಇಒ, ಕೋಲಾರ ಜಿ.ಪಂ
- ಜಿ.ಕುಮಾರ್ ಗಂಗವರ್ – ಸಿಇಒ, ಬೀದರ್ ಜಿ.ಪಂ.
- ಕೆ.ಜ್ಯೋತಿ – ನಿರ್ದೇಶಕಿ, ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ
ಮೊಹಮ್ಮದ್ ಇಕ್ರಮುಲ್ಲಾ ಷರೀಫ್ ಹಾಗೂ ಪಡ್ವೆ ರಾಹುಲ್ ತುಕಾರಂ ಕೇವಲ 24 ಗಂಟೆಗಳಲ್ಲಿ 2 ನೇ ಬಾರಿಗೆ ವರ್ಗಾವಣೆಯಾಗಿದ್ದಾರೆ. ನೂತನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ವರ್ಗಾವರ್ಗಿ ಮಿತಿಮೀರಿರುವ ಬಗ್ಗೆ ರಾಜಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದರೂ ವರ್ಗಾವಣೆ ಮಾತ್ರ ನಿಂತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
