ಶಿವಮೊಗ್ಗ :
ಹಂದಿ ಹೊಡೆಯಲೆಂದು ಸಂಗ್ರಹಿಸಿಡಲಾಗಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ 9 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ಕುಂಚೇನಹಳ್ಳಿ ಎಂಬಲ್ಲಿ ನಡೆದಿದೆ.
ನಗರದ ಕುಂಚೇನಹಳ್ಳಿಯ ಸಮೀಪದಲ್ಲಿ ಕಾಡು ಹಂದಿ ಭೇಟೆಯಾಡಲು ಬಳಸುವಂತ ನಾಡಬಾಂಬ್ ತಯಾರಿಸುತ್ತಿದ್ದರಂತೆ. ಹೀಗೆ ತಯಾರಿಸಿದಂತ ನಾಡಬಾಂಬ್ ಗಳನ್ನು ಕೆಲಸಗಾರರ ಜೊತೆಗೆ ಬಿಸಿಲಿಗೆ ಒಣಗಿಸಲು ಹಾಕಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಪೋಟಗೊಂಡಿವೆ.
ಪರಿಣಾಮ ಸ್ಥಳದಲ್ಲಿದ್ದ 9 ಮಂದಿ ಗಾಯಗೊಂಡಿದ್ದು, ಇದರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
