ಚಿಕ್ಕಮಗಳೂರು : ರಸ್ತೆ ಅಪಘಾತದಲ್ಲಿ ಇಬ್ಬರ ಬಲಿ!!

ಚಿಕ್ಕಮಗಳೂರು: 

      ಲಾರಿ-ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿ ರುವ ಘಟನೆ ಬೀರೂರಿನ ಬಳಿ ನಡೆದಿದೆ.

      ಬೀರೂರಿನ ಬಳಿಗನೂರು ಗ್ರಾಮದ ಮಲ್ಲಪ್ಪ(52) ಹಾಗೂ ಉತ್ಸವ್‌(12) ಮೃತ ದುರ್ದೈವಿಗಳು. ಇವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಡೂರು-ಬೀರೂರಿನ ಮಾರ್ಗ ಮಧ್ಯದಲ್ಲಿ ಚಲಿಸುತ್ತಿದ್ದ ಲಾರಿ, ಬೈಕ್‌ಗೆ‌ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

      ಅಫಘಾತವಾಗುತ್ತಿದ್ದಂತೆ ಹಿಂದೆ ಬರುತ್ತಿದ್ದ ಬೊಲೆರೋ ಜೀಪ್ ಕೂಡಾ ಮರಕ್ಕೆ ಡಿಕ್ಕಿ ಹೊಡೆದು ಜಖಂ ಆಗಿದೆ.

       ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap