ಚಿತ್ರದುರ್ಗ : ಎರಡು ಲಾರಿಗಳ ಮುಖಾಮುಖಿ : ಚಾಲಕರಿಬ್ಬರ ಸಾವು!!!

ಚಿತ್ರದುರ್ಗ :

       ಲಾರಿ-ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಚಾಲಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

       ಲಾರಿ ಚಾಲಕ ಶಿವರಾಜ್, ಟಿಪ್ಪರ್ ಚಾಲಕ ಸುರೇಂದ್ರ ಮೃತ ದುರ್ದೈವಿಗಳು. ತಳಕು ಕಡೆಯಿಂದ ಹೋಗುತ್ತಿದ್ದ ಟಿಪ್ಪರ್​ಗೆ ಮೊಳಕಾಲ್ಮೂರು ಕಡೆಯಿಂದ ಬಂದ ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

       ಘಟನೆಯಲ್ಲಿ ಲಾರಿಯಲ್ಲಿದ್ದ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದ ಪ್ರಕಾಶ್, ಆಂಜನೇಯ, ತಿಪ್ಪೇಶಿ ತಿಪ್ಪೇಸ್ವಾಮಿಯವರಿಗೆ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

      ಈ ಘಟನೆಗೆ ಸಂಬಂಧಿಸಿದಂತೆ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ