ವಿಜಯಪುರ : ಭೀಕರ ಅಪಘಾತದಲ್ಲಿ ತಂದೆ-3 ವರ್ಷದ ಮಗಳ ದುರ್ಮರಣ!!

ವಿಜಯಪುರ :

      ಕಾರು-ಬೈಕ್​ ಡಿಕ್ಕಿಯಾಗಿ ತಂದೆ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ ದುರ್ಘಟನೆ ಜಿಲ್ಲೆಯ ಕೊಲ್ಹಾರದ ಯುಕೆಪಿ ಕ್ಯಾಂಪ್ ನಿಂದ ಬಸವನಬಾಗೇವಾಡಿಗೆ ಹೋಗುವ ಮಾರ್ಗದ ಬನ್ನಿಹಳ್ಳದ ಹತ್ತಿರ ಸಂಭವಿಸಿದೆ.

     ಮೃತರನ್ನು ಬಬಲೇಶ್ವರ ತಾಲ್ಲೂಕಿನ ಮದಗುಣಕಿ ಗ್ರಾಮದ ಧರೇಪ್ಪ ಅರವಿಂದ ಶಿವನ್ನವರ(28) ಮತ್ತು ಆತನ 3 ವರ್ಷದ ಮಗಳು ಸಾನ್ವಿಕಾ ಎಂದು ಗುರುತಿಸಲಾಗಿದೆ.

      ತೆಲಗಿಯಲ್ಲಿ ಧರೆಪ್ಪ ಸಂಬಂಧಿಕರ ಮದುವೆ ಕಾರ್ಯಮವಿತ್ತು. ಅಲ್ಲಿಗೆ ಮದಗುಣಕಿ ಗ್ರಾಮದಿಂದ ಬೈಕ್​ನಲ್ಲಿ ಹೋರಟ ಧರೆಪ್ಪ, ತನ್ನ ಮಗಳನ್ನೂ ಬೈಕ್ ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಬೈಕ್​ಗೆ ಕಾರು ಡಿಕ್ಕಿಯಾಗಿದೆ. ಅಪಘಾತವಾಗುತ್ತಿದ್ದಂತೆ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

      ಮದಗುಣಕಿ ಗ್ರಾಮದ ಅರವಿಂದ ಕುಟುಂಬ ಕಳೆದ ಕೆಲ ವರ್ಷಗಳಿಂದ ಕೊಲ್ಹಾರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿತ್ತು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.  ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap