ಬೆಂಗಳೂರು:
ಪೂರ್ವ ತಾಲ್ಲೂಕಿನ ಮಹಾದೇವಪುರ ಕ್ಷೇತ್ರ ವ್ಯಾಪ್ತಿಯ ಮಂಡೂರು ಪೋಸ್ಟ್ ಆಫೀಸ್ ಕಸದ ತೊಟ್ಟಿಯಲ್ಲಿ ಆಧಾರ್ ಕಾರ್ಡ್ ಗಳು, ಸಾಲಮನ್ನಾ ಪತ್ರಗಳು, ಬ್ಯಾಂಕ್ ಚೆಕ್ ಬುಕ್ ಗಳು ಸೇರಿ ನೂರಾರು ದಾಖಲೆಗಳು ಪತ್ತೆಯಾಗಿವೆ.
ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಪೋಸ್ಟ್ ಮೂಲಕ ಬಂದ ಅವುಗಳನ್ನು ಸಂಬಂಧಪಟ್ಟವರಿಗೆ ತಲುಪಿಸದೆ ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೂರಕ್ಕೂ ಹೆಚ್ಚು ರೈತರ ಸಾಲಮನ್ನಾ ಪ್ರಮಾಣಪತ್ರಗಳು ಪತ್ತೆಯಾಗಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/Adhar-Card.gif)