ಚಿಕ್ಕಮಗಳೂರು:
ತೀವ್ರ ಮಳೆಯಿಂದಾಗಿ ಗಾಳಿ-ಮಳೆಗೆ ಸಿಲುಕಿ ಮನೆಯೇ ನೆಲಸಮವಾದರೂ ಪವಾಡ ಎಂಬಂತೆ ಒಂದೂವರೆ ವರ್ಷದ ಮಗುವೊಂದು ಬದುಕಿ ಉಳಿದಿರುವುದು ಅಚ್ಚರಿಯನ್ನುಂಟು ಮಾಡಿದೆ.
ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾದ ಮಳೆ, ಜೋರು ಗಾಳಿಗೆ ಏಕಾಏಕಿ ಮನೆಯೊಂದು ಬಿದ್ದಿದೆ. ಚಾವಣಿ, ಗೋಡೆ ಎಲ್ಲವೂ ನೋಡನೋಡುತ್ತಿದ್ದಂತೆ ಕುಸಿಯುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಸರಿಯಾಗಿ ನೋಡಬೇಕೆಂದು ಮನೆಯವರು ಹೊರಗೆ ಬರುವಷ್ಟರಲ್ಲೇ ಮನೆ ಧೊಪ್ಪನೆ ನೆಲಕ್ಕೆ ಉರುಳಿದೆ. ಮನೆ ಬೀಳುತ್ತಿದ್ದಂತೆ ಮನೆಯೊಳಗಿದ್ದ ಒಂದೂವರೆ ವರ್ಷದ ಕಂದನಿಗೆ ಹುಡುಕಾಟ ನಡೆಸಿದ್ದಾರೆ.
ಮನೆ ಉರುಳಿದ ರಭಸಕ್ಕೆ ಆಘಾತಗೊಂಡ ತಾಯಿ ಮಗುವಿಗಾಗಿ ಅಳುತ್ತಾ ಹುಡುಕಾಟ ನಡೆಸಿದ್ದಾರೆ. ಅದರೆ ಅಚ್ಚರಿ ಎಂಬಂತೆ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ, ಭೂ ಕುಸಿತದ ಘಟನೆಗಳೂ ನಡೆಯುತ್ತಿವೆ. ಮಳೆ ಆಹುತಿ ತೆಗೆದುಕೊಂಡಿರುವ ಮನೆಗಳಿಗೂ ಲೆಕ್ಕವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/child-save.gif)