ಮೈಸೂರು : ಯುವ ದಸರಾ ಉದ್ಘಾಟನೆಗೆ ಪಿ.ವಿ.ಸಿಂಧುಗೆ ಆಹ್ವಾನ!!

ಮೈಸೂರು :

     ಈ ಬಾರಿಯ ಮೈಸೂರು ಯುವ ದಸರಾ ಮಹೋತ್ಸವಕ್ಕೆ ಬ್ಯಾಡ್ಮಿಂಟನ್​ ತಾರೆ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ.

     ಅಕ್ಟೋಬರ್​ 1ರಂದು ಯುವ ದಸರಾ ಪ್ರಾರಂಭಗೊಳ್ಳಲಿದೆ. ಇದನ್ನು ಉದ್ಘಾಟಿಸಲು ಬರುವಂತೆ ಕೋರಿ ಸಿಎಂ ಬಿ.ಎಸ್​. ಯಡಿಯೂರಪ್ಪ ನಾಲ್ಕು ದಿನಗಳ ಹಿಂದೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್​​ ನಲ್ಲಿರುವ ಅವರ ನಿವಾಸದಲ್ಲಿ ಸದಸ್ಯ ಪ್ರತಾಪ್​ ಸಿಂಹ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸುವಂತೆ ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು.

     ನಂತರ ಪಿ.ವಿ ಸಿಂಧು ಮತ್ತು ಅವರ ಕುಟುಂಬದವರ ಬರುವಿಕೆಗಾಗಿ ಕಾಯುತ್ತಿದ್ದೇವೆ ಅಂತಾ ಸಂಸದ ಪ್ರತಾಪ್​​ ಸಿಂಹ ಟ್ವೀಟ್ ಕೂಡಾ​ ಮಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap