ಬೆಂಗಳೂರು :
ರಾಜ್ಯ ರಾಜಧಾನಿಯಲ್ಲಿನ ಕೊರೋನಾ ಕಂಟ್ರೋಲ್ ಗೆ ರಣತಂತ್ರ ರೂಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಂಗಳೂರಿನಲ್ಲಿ ಕೊರೋನಾ ಕಂಟ್ರೋಲ್ ನ ಹೊಣೆಗಾರಿಕೆಯನ್ನು ಅಷ್ಟ ದಿಕ್ಪಾಲಕರಿಗೆ ವಹಿಸಿದ್ದಾರೆ.
ನಗರದಲ್ಲಿನ ಕೊರೋನಾ ನಿಯಂತ್ರಣಕ್ಕಾಗಿ 8 ವಲಯಗಳಾಗಿ ವಿಭಾಗಿಸಿ, ಸಚಿವರು ಸೇರಿದಂತೆ 8 ಸಿಎಂ ರಾಜಕೀಯ ಕಾರ್ಯದರ್ಶಿಗಳಿಗೆ ಹೊಣೆಗಾರಿಕೆ ವಹಿಸಿದ್ದ ರಾಜ್ಯ ಸರ್ಕಾರ, ಇದರೊಂದಿಗೆ 8 ವಲಯಕ್ಕೂ 8 ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರಿನ 8 ವಲಯಗಳಿಗೆ 8 ಐಎಎಸ್ ಅಧಿಕಾರಿಗಳ ನೇಮಕ :
- ಬೆಂಗಳೂರು ಪೂರ್ವ – ತುಷಾರ್ ಗಿರಿನಾಥ್
- ಬೆಂಗಳೂರು ಪಶ್ಚಿಮ – ರಾಜೇಂದ್ರ ಕುಮಾರ್ ಕಠಾರಿಯಾ
- ಬೊಮ್ಮನಹಳ್ಳಿ – ಕ್ಯಾಪ್ಟಣ್ ಪಿ.ಮಣಿವಣ್ಣನ್
- ಯಲಹಂಕ – ನವೀನ್ ರಾಜ್ ಸಿಂಗ್
- ಬೆಂಗಳೂರು ದಕ್ಷಿಣ – ಮುನಿಷ್ ಮೌದ್ಗಿಲ್
- ಮಹದೇವಪುರ – ಡಾ.ಎನ್.ಮಂಜುಳ
- ದಾಸರಹಳ್ಳಿ – ಡಾ.ಪಿ.ಸಿ.ಜಾಫರ್
- ರಾಜರಾಜೇಶ್ವರಿನಗರ – ಡಾ.ಆರ್.ವಿಶಾಲ್
ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್, ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆ ಮತ್ತು ಪರಿಶೀಲಿಸಲು ಹಾಗೂ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರ್ಯೋನ್ಮುಖರಾಗಲು ಅನುವಾಗುವಂತೆ ಈ ಕೆಳಕಂಡ ವಲಯ ಸಂಯೋಜಕರನ್ನು ಜುಲೈ.9, 2020ರಿಂದ ಅನ್ವಯವಾಗುವಂತೆ ರಚಿಸಿ, ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
