ಬಳ್ಳಾರು :
ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನೆಯ ಮೇಲ್ಛಾವಣೆ ಕುಸಿದು ಮೂರು ಜನ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಖಾದರಭಾಷ ಇವರ ಕಚ್ಚಾ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಖಾದರಭಾಷ ಕುಟುಂಬದ ಖಾದರ್ ಭಾಷಾ ಅವರ ಪತ್ನಿ ಇಮಾಮ್ (45) ಹಸೀನ(25), ಆಕೆಯ ಮಗ ಇಮ್ರಾನ್ (3) ಸಾವನ್ನಪ್ಪಿದ್ದಾರೆ.
ಕಟ್ಟಡ ಕುಸಿದಿರುವ ಮಣ್ಣಿನಡಿಯಿಂದ (ಅವಶೇಷಗಳಿಂದ) ಶವಗಳನ್ನು ಗ್ರಾಮಸ್ಥರೇ ಹೊರತೆಗೆದಿದ್ದಾರೆ. ಸ್ಥಳಕ್ಕೆ ಬಳ್ಳಾರಿ ಎಸ್ಪಿ ಸಿಕೆ.ಬಾಬಾ ಮತ್ತು ಜಿ.ಪಂ ಸಿಇಓ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/090831a2bc32de19003859b8938.gif)