ಬೆಂಗಳೂರು
ನಗರದ ಕುಮಾರಕೃಪ ರಸ್ತೆಯ ಚಿತ್ರಕಲಾ ಪರಿಷತ್ನಲ್ಲಿ ಅನಾವರಣಗೊಂಡಿರುವ ಬೆಂಗಲ್ ಸಂಸ್ಕೃತಿಗಳ ಶಿಲ್ಪಕಲಾ ಸೊಬಗು ಚಿತ್ರರಸಿಕರ ಮನ ಸೂರೆಗೊಳ್ಳತೊಡಗಿದೆ
ಪರಿಷತ್ತಿನ ಗ್ಯಾಲರಿಯಲ್ಲಿ ಮಂಗಳವಾರದಿಂದ ಭಾನುವಾರದವರೆಗೆ ಐದು ದಿನಗಳ ಕಾಲ ರವರೆಗೆ ನಡೆಯಲಿರುವ ಕೋಲ್ಕತ್ತಾ ಮೂಲದ 23 ಯುವ ಶಿಲ್ಪ ಕಲಾವಿದರು ಆಯೋಜಿಸಿರುವ ‘ಬೆಂಗಲ್ ಮತ್ತು ಬೆಂಗಳೂರು’ಶಿಲ್ಪ ಕಲಾ ಪ್ರದರ್ಶನದಲ್ಲಿ ಶಿಲ್ಪಕಲಾ ಕೃತಿಗಳು ಚಿತ್ರರಸಿಕರ ಮನತಣಿಸತೊಡಗಿವೆ.
ಪ್ರದರ್ಶನದಲ್ಲಿ 32 ಸಮಕಾಲೀನ ಶಿಲ್ಪಗಳು,33 ಸಾಂಪ್ರದಾಯಿಕ ಶಿಲ್ಪಗಳು ಸೇರಿ ಒಟ್ಟು 65 ಕೃತಿಗಳಿವೆ.ಶಿಲ್ಪಗಳಲ್ಲಿ ಸಾಂಪ್ರದಾಯಿಕ ಶಿಲ್ಪಗಳಾದ ಅರ್ಧ ನಾರೀಶ್ವರ, ಕಾರ್ತಿಕೇಯ, ದುರ್ಗಾದೇವಿ, ಭೂವರಾಹ ಹೀಗೆ ಅನೇಕ ಕಲಾಕೃತಿಗಳು ಪ್ರದರ್ಶನದ ವಿಶೇಷವಾಗಿವೆ.
ಸಮಕಾಲೀನ ಕಲಾಕೃತಿಗಳಲ್ಲಿ ಕೃಷ್ಣ, ಗಣೇಶ ಹೇಗೆ ಹಲವು ದೇವತೆಗಳ ಕಲಾಕೃತಿಗಳನ್ನು ಇಂದಿನ ಮಾಧ್ಯಮ ರೀತಿಯಲ್ಲಿ ವಿಡಂಬನಾತ್ಮಕವಾಗಿ ಕಲೆಗಾರರು ರಚಿಸಿರುವುದು ವಿಶೇಷವಾಗಿ ಆಕರ್ಷಣೆಗೊಂಡಿವೆ.ಯುವ ಕಲಾವಿದೆ ಮಧುರಿಮಾ ಗುಹಾ ಅವರ ಕಲಾ ಕೃತಿಯಲ್ಲಿ, ಹೆಣ್ಣು ಮಕ್ಕಳು ಒಬ್ಬಳು, ಹೂವಿನ ಬಳ್ಳಿ ಹಿಡಿದು ಕೊಂಡಿದ್ದು, ಈ ಬಳ್ಳಿ ಯೊಳಗೆ ಮತ್ತೊಬ್ಬ ಬಾಲೆ, ಹೊರ ಬರಲು ಕಾಯುತ್ತಿರುವ ಚಿತ್ರ ಅಡಗಿದೆ.ಇದು, ಖಿನ್ನ ಮನಸ್ಕನಾಗಿ ತನ್ನ ಆತ್ಮವಿಶ್ವಾಸ ಕಳೆದುಕೊಂಡು ತನ್ನ ಬಾಳಿಗೆ ಅಂತ್ಯ ಹಾಡುತ್ತಿರುವ ಮನುಷ್ಯನ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.
ಹೀಗೆ, ಇಂದಿನ ಸ್ಥಿತಿ ಗತಿ, ದೇವರುಗಳ ರೂಪ, ರಾಧಾ-ಕೃಷ್ಣ ಮೌನ ಸೇರಿದಂತೆ ಹತ್ತಾರು ಕಲಾಕೃತಿಗಳು ಪ್ರದರ್ಶನದಲ್ಲಿ. ಸತತ ಎಂಟು ವರ್ಷಗಳಿಂದ ಕಲ್ಕತ್ತಾ ಮೂಲದ ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ ಎಂದು ಆಯೋಜಕ ಸುಭದ್ರ ಗೋಷ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
