ಬೆಂಗಳೂರು :
ಪೊಲೀಸರ ಹುಟ್ಟುಹಬ್ಬದ ದಿನದಂದು ಎಷ್ಟೇ ಕಾರ್ಯದೊತ್ತಡವಿದ್ದರೂ ಅವರುಗಳಿಗೆ ರಜೆ ನೀಡುವಂತೆ ಬೆಂಗಳೂರು ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್, ಆದೇಶಿಸಿದ್ದಾರೆ.
ಸದಾ ಕರ್ತವ್ಯದಲ್ಲಿರುವ ಪೊಲೀಸರಿಗೆ ಕೆಲಸದ ಮಧ್ಯದಲ್ಲಿ ವಾರದ ರಜೆ ಕೂಡ ಒಮ್ಮೊಮ್ಮೆ ಸಿಗುವುದಿಲ್ಲ. ಕೆಲವೊಮ್ಮೆ ಮುಖ್ಯವಾದ ಕೆಲಸಕ್ಕೆ ಹೋಗೋಕೂ ರಜೆ ಸಿಗದೇ ಹೋಗೋಕೆ ಆಗೋದಿಲ್ಲ. ಆದ್ದರಿಂದ ಪೊಲೀಸರು ತಮ್ಮ ಹುಟ್ಟುಹಬ್ಬದ ದಿನವಾದರೂ ಕುಟುಂಬದೊಂದಿಗೆ ಕಾಲ ಕಳೆಯಲಿ ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.
ಈ ಕುರಿತು ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚನೆ ರವಾನಿಸಲಾಗಿದ್ದು, ಅಲ್ಲದೇ ಪೊಲೀಸರ ಹುಟ್ಟು ಹಬ್ಬದ ದಿನದಂದು ಆಯುಕ್ತರ ಕಛೇರಿಯಿಂದ ಗ್ರೀಟಿಂಗ್ಸ್ ಕೂಡಾ ಕಳುಹಿಸಲಾಗುತ್ತದೆ.
ಈ ಹಿಂದೆ ಪೊಲೀಸರಿಗೆ ಅವರ ಹುಟ್ಟು ಹಬ್ಬವನ್ನು ಕುಟುಂಬಸ್ಥರ ಜೊತೆಗೆ ಆಚರಿಸಿಕೊಳ್ಳಲು ರಜೆ ಎಲ್ಲಿಂದ ಸಿಗಬೇಕು ಎಂಬ ಪರಿಸ್ಥಿತಿ ಇತ್ತು. ಇದೀಗ ಇಂತಹ ಪರಿಸ್ಥಿತಿಗೆ ಬ್ರೇಕ್ ಬಿದ್ದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
