ರಾಯಚೂರು:
ಕ್ವಾರಂಟೈನ್ನಲ್ಲಿದ್ದ ಬಾಲಕನೊಬ್ಬ ಹೊಟ್ಟೆನೋವಿನ ಬಾಧೆ ತಾಳದೆ ಮೃತಪಟ್ಟ ಘಟನೆ ಗುರುವಾರ ಬೆಳಗಿನ ಜಾವ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಜರುಗಿದೆ.
ದೇವದುರ್ಗ ತಾಲ್ಲೂಕು ಮದರಕಲ್ ಗ್ರಾಮದ ಮಲ್ಲೇಶ (14) ಮೃತ ಬಾಲಕ. ಜಿಲ್ಲೆಯ ದೇವದುರ್ಗ ಪಟ್ಟಣದ ಪದವಿ ಪೂರ್ವ ಕಾಲೇಜು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ ಈ ಬಾಲಕ ಪಾಲಕರೊಂದಿಗೆ ಮುಂಬೈನಿಂದ ಮೇ 16 ರಂದು ಬಂದಿದ್ದರಿಂದ ಕ್ವಾರಂಟೈನ್ ಮಾಡಲಾಗಿತ್ತು.
ಬಾಲಕನ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಇಂದಿಗೆ ಕ್ವಾರಂಟೈನ್ ನಲ್ಲಿದ್ದು 20 ದಿನವಾದ್ರೂ ಇವರನ್ನು ಮನೆಗೆ ಕಳುಹಿಸಿರಲಿಲ್ಲ. ಇದೇ ಸೋಮವಾರ ಬಾಲಕನ ಮಾದರಿ ಮರು ಪರೀಕ್ಷೆಗೆ ಕಳುಹಿಸಿತ್ತು. 3 ದಿನದ ಹಿಂದೆ ಮೊಳಕಾಲು ನೋವು ಎಂದು ಬಳಲುತ್ತಿದ್ದ ಬಾಲಕನಿಗೆ ವೈದ್ಯರು ಮಾತ್ರೆಗಳನ್ನು ನೀಡಿದ್ದರು. ಆದರೆ, ಬುದವಾರ ರಾತ್ರಿ 11 ಗಂಟೆಯಿಂದ ಹೊಟ್ಟೆ ನೋವು ತಾಳಲಾಗದೆ ಬಾಲಕ ಯಾತನೆ ಅನುಭವಿಸುತ್ತಿದ್ದ.
ಹೊಟ್ಟೆನೋವು ಶುರುವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕನ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/06/Dead-Body.gif)