ಬೈಕ್ ಮೇಲೆ ಹರಿದ ಲಾರಿ : ಅಣ್ಣ-ತಂಗಿ ಸಾವು!!!

ರಾಯಚೂರು: 

      ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಅಣ್ಣ-ತಂಗಿ ಮೃತಪಟ್ಟಿದ್ದು, ಬಾಲಕನೋರ್ವ ಆಶ್ಚರ್ಯ ರೀತಿಯಲ್ಲಿ ಪಾರಾಗಿರುವ ಘಟನೆ ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ.

      ಅಸ್ಕಿಹಾಳ ಗ್ರಾಮದ 26 ವರ್ಷದ ಗೌರಿಶಂಕರ್ ಹಾಗೂ 22 ವರ್ಷದ ಕೀರ್ತಿ ಮೃತ ದುರ್ದೈವಿಗಳು. ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಘಟನೆ ನಡೆದಿದ್ದು, ಅಪಘಾತದಲ್ಲಿ ಗೌರಿಶಂಕರ್ ಅವರ ಮಗ ಪಾರಾಗಿದ್ದಾನೆ.

      ಮೃತ ಗೌರಿಶಂಕರ್ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಂಡತಿಯನ್ನ ಮಾತನಾಡಿಸಿಕೊಂಡು ಮನೆಗೆ ಹೊರಟಿದ್ದರು. ಜೊತೆಗೆ ಆತನ ಸಹೋದರಿ ಕೀರ್ತಿ ಮತ್ತು ಮಗ ಇದ್ದರು. ಈ ವೇಳೆ ಬಸವೇಶ್ವರ ವೃತ್ತದಲ್ಲಿ ನಿಧಾನವಾಗಿ ಲಾರಿ ಮುಂದು ಹೋಗುತ್ತಿದ್ದರು. ಆಗ ಲಾರಿ ಅವರಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಮೂವರು ಲಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಲಾರಿ ಬೈಕ್ ಮೇಲೆ ಹರಿದಿದೆ. ಪರಿಣಾಮ ಅಣ್ಣ-ತಂಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

     ಅಪಘಾತದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ರಾಯಚೂರು ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

       

Recent Articles

spot_img

Related Stories

Share via
Copy link