ರೈತರಿಗೆ ಸಿಹಿಸುದ್ಧಿ : ರೈತರ ಮೇಲಿನ ಎಲ್ಲ ಕೇಸ್ ವಾಪಸ್​!?

 ಬೆಂಗಳೂರು :

      ರೈತಪರ ಹೋರಾಟದ ವೇಳೆ ರೈತರ ಮೇಲೆ ದಾಖಲಾಗಿರುವ ಎಲ್ಲ ಕೇಸ್​ಗಳನ್ನು ವಾಪಸ್​​ ಪಡೆಯುವುದಾಗಿ ಭರವಸೆ ನೀಡಿ ರಾಜ್ಯದ ರೈತ ಪರ ಹೋರಾಟಗಾರರಿಗೆ ಬಿಎಸ್ ವೈ ಸರ್ಕಾರ ಸಿಹಿಸುದ್ದಿನೀಡಿದ್ದಾರೆ.

      ರೈತ ಮುಖಂಡ ಶಾಂತಕುಮಾರ್ ನೇತೃತ್ವದಲ್ಲಿ ರೈತ ಸಂಘಟನೆಗಳ ಒಕ್ಕೂಟ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ರೈತರ ಮೇಲಿನ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದರು.

      ಈ ವೇಳೆ ಸಿಎಂ ಬಿ.ಎಸ್. ಯಡಿಯುರಪ್ಪ ಮನವಿಗೆ ಸ್ಪಂದಿಸಿದ್ದು, ರೈತಪರ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೇಸ್ ವಾಪಸ್​​ ಪಡೆಯುವ ಕುರಿತು ಅಗತ್ಯ ಕ್ರಮಕ್ಕೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link