ಚಿಕ್ಕಮಗಳೂರು : ತಿಥಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು!!

ಚಿಕ್ಕಮಗಳೂರು:

      ರಜೆಯ ಮೇಲೆ ಊರಿಗೆ ಬಂದಿದ್ದ ಸೈನಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

      ಚಿಕ್ಕಮಗಳೂರು ತಾಲೂಕಿನ ಬಾಳೇನಹಳ್ಳಿ ಗ್ರಾಮದ ಚಿದಾನಂದ್ ( 27) ಅಪಘಾತದಲ್ಲಿ ಮೃತಪಟ್ಟ ಸೈನಿಕ. 

      ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿದಾನಂದ್ ಕಳೆದ ಎರಡು ದಿನಗಳ ಹಿಂದೆ ಚಿಕ್ಕಪ್ಪನ ತಿಥಿ ಕಾರ್ಯಕ್ಕೆ ಬಂದಿದ್ದರು. ಮೊನ್ನೆ ಬೈಕ್ ನಲ್ಲಿ ಸಖರಾಯಪಟ್ಟಣ ದಿಂದ ಬಾಳೇನಹಳ್ಳಿ ಗೆ ಹೋಗುವಾಗ ಅಪಘಾತ ನಡೆದಿತ್ತು. ಆದರೆ ಅವರ ಮೃತದೇಹ ಪತ್ತೆಯಾಗಿರಲಿಲ್ಲ. ಪೊಲೀಸ್ ನೆಟ್ ವರ್ಕ್ ಬಳಸಿ ತನಿಖೆ ನಡೆಸಿದಾಗ 20 ಗಂಟೆ ನಂತರ ಹಳ್ಳದಲ್ಲಿ ಬಿದ್ದಿದ್ದ ಯೋಧನ‌ ಮೃತ ದೇಹ ಪತ್ತೆ ಮಾಡಲಾಗಿದೆ.

      ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap